ಕೊರೋನಾ ಎಕ್ಸ್ಪ್ರೆಸ್: ವದಂತಿ ಹಬ್ಬಿಸಿದ ಬಿಜೆಪಿ ಸಂಸದನ ವಿರುದ್ಧ ಕೇಸ್ ದಾಖಲು..!
ಆಂಧ್ರದಲ್ಲೂ ದಿನೇ-ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸ್ವತಃ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಬೆಂಗಳೂರು(ಏ.18):ಕೊರೋನಾ ರೋಗಿಗಳ ವಿಚಾರದಲ್ಲಿ ಸುಮ್ಮನೆ ವದಂತಿ ಹಬ್ಬಿಸಿದ್ದ ಬಿಜೆಪಿ ಸಂಸದ ಸುಭಾಷ್ ಸರ್ಕಾರ್ ವಿರುದ್ಧ ಕೇಸ್ ದಾಖಲಾಗಿದೆ. ತರಾತುರಿಯಲ್ಲಿ ಸೋಂಕಿತ ಮೃತರ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂದು ವದಂತಿ ಹಬ್ಬಿಸಿದ್ದರು.
ಇನ್ನು ಆಂಧ್ರದಲ್ಲೂ ದಿನೇ-ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸ್ವತಃ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಲಾಕ್ಡೌನ್ ಮಧ್ಯೆಯೂ ನಡೆಯಿತು ಹನುಮಾನ್ ರಥೋತ್ಸವ..!
ಕೇರಳದಲ್ಲಿ ಕೊರೋನಾ ವೈರಸ್ ಹತೋಟಿಗೆ ಬಂದಿದೆ. ಹೀಗಾಗಿ ಏಪ್ರಿಲ್ 20ರ ನಂತರ ವಾಹನ ಓಡಾಡಕ್ಕೆ ವಿನಾಯಿತಿ ನೀಡಲಾಗಿದೆ. ಕೊರೋನಾ ಎಕ್ಸ್ಪ್ರೆಸ್ನಲ್ಲಿ ಇನ್ನೂ ಕೆಲವು ಸುದ್ದಿಗಳು ಇಲ್ಲಿವೆ ನೋಡಿ.