
ಕೊರೋನಾ ತಡೆಯಲು ರಣತಂತ್ರ: ಗಡಿಯಲ್ಲಿ ಕಠಿಣ ನಿಯಮ ಜಾರಿ
* ದೇಶದ ಅರ್ಧದಷ್ಟು ಪ್ರಕರಣಗಳು ಕೇರಳದಿಂದಲೇ ಪತ್ತೆ
* ಮಹಾರಾಷ್ಟ್ರದಲ್ಲೂ ದಿನೇ ದಿನೆ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳು
* ಕೊರೋನಾ ನಿಯಂತ್ರಣಕ್ಕೆ ದಿನದ 24 ಗಂಟೆ ತಪಾಸಣೆ
ಬೆಂಗಳೂರು(ಆ.01): ಕರ್ನಾಟಕಕ್ಕೆ ಕಂಟಕವಾಗುತ್ತಾ ಕೇರಳ ಮತ್ತು ಮಹಾರಾಷ್ಟ್ರ?, ಕೊರೋನಾ ಮೂರನೇ ಅಲೆ ಕೇರಳದಿಂದ ಬರುತ್ತಾ?. ದೇಶದ ಅರ್ಧದಷ್ಟು ಪ್ರಕರಣಗಳು ಕೇರಳದಿಂದಲೇ ಪತ್ತೆಯಾಗುತ್ತಿವೆ. ಮಹಾರಾಷ್ಟ್ರದಲ್ಲೂ ಕೂಡ ದಿನೇ ದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಕೇರಳಿಗರ ರಾಜ್ಯ ಪ್ರವಾಸಕ್ಕೆ ಕಠಿಣಾತಿ ಕಠಿಣ ನಿಯಮಗಳನ್ನ ಜಾರಿ ಮಾಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ದಿನದ 24 ಗಂಟೆಗಳ ಕಾಲ ತಪಾಸಣೆ ನಡೆಸಲಾಗುತ್ತಿದೆ.
Add Asianetnews Kannada as a Preferred Source
