
Karnataka Politics: ಸಂಘಟನೆಗಳ ಜೊತೆ ಎಚ್ಡಿಕೆ ರಹಸ್ಯ ಸಭೆ, ಏನಿದು ಜೆಡಿಎಸ್ ಲೆಕ್ಕಾಚಾರ.?
ಬಿಜೆಪಿ- ಕಾಂಗ್ರೆಸ್ಗೆ ಟಕ್ಕರ್ ಕೊಡಲು ಜೆಡಿಎಸ್ ಪ್ಲ್ಯಾನ್ ಮಾಡಿದೆ. ಜೆಪಿ ನಗರ ನಿವಾಸದಲ್ಲಿ ಸಂಘಟನೆಗಳ ಜೊತೆ ಎಚ್ಡಿಕೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಇರುವುದೊಂದೆ ಪರಿಹಾರ, ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ' ಎಂಬ ಸ್ಲೋಗನ್ ಅಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಬೆಂಗಳೂರು (ಫೆ. 07): ಬಿಜೆಪಿ- ಕಾಂಗ್ರೆಸ್ಗೆ ಟಕ್ಕರ್ ಕೊಡಲು ಜೆಡಿಎಸ್ ಪ್ಲ್ಯಾನ್ ಮಾಡಿದೆ. ಜೆಪಿ ನಗರ ನಿವಾಸದಲ್ಲಿ ಸಂಘಟನೆಗಳ ಜೊತೆ ಎಚ್ಡಿಕೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಇರುವುದೊಂದೆ ಪರಿಹಾರ, ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ' ಎಂಬ ಸ್ಲೋಗನ್ ಅಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ರಾಜ್ಯದ ಎಲ್ಲಾ ಸ್ಥಳೀಯ ಸಂಘಟನೆಗಳ ವಿಶ್ವಾಸ ಗಳಿಸುವತ್ತ ಜೆಡಿಎಸ್ ಚಿತ್ತ ಹರಿಸಿದೆ.
Add Asianetnews Kannada as a Preferred Source

Uttar Pradesh Election: ಯೋಗಿ ಮತ್ತೆ ಸಿಎಂ ಆಗಬೇಕು, ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಭಕ್ತನ ಪಾದಯಾತ್ರೆ
ಕನ್ನಡ ಸಂಘಟನೆಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ರಾಜ್ಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಂದಿನ ವಾರ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರ ಜತೆ ಮಹತ್ವದ ಸಭೆ ನಡೆಸುವುದಾಗಿ ಎಚ್ಡಿಕೆ ತಿಳಿಸಿದ್ದಾರೆ.