ಪಿಎಂ ದೇವೇಗೌಡ @ 25: ಹೊಳೆನರಸೀಪುರ ರೈತನ ಮಗ ಇಡೀ ದೇಶವನ್ನೇ ಆಳಿದ ಸಾಹಸಗಾಥೆ
- ಪ್ರಧಾನಿ ಹುದ್ದೆ ತೊರೆದರೂ ದೇಶಕ್ಕಾಗಿ ಹೋರಾಡುವ ದೇವೇಗೌಡರು
- ಜೂ.1 ಕನ್ನಡಿಗರ ಸೌಭಾಗ್ಯದ ದಿನ
- ಭ್ರಷ್ಟಾಚಾರ, ಗಲಭೆ, ಭಯೋತ್ಪಾದನೆಗೆ ಅವಕಾಶ ನೀಡದೆ ಆಡಳಿತ ನಡೆಸಿದ್ದರು
ಬೆಂಗಳೂರು (ಜೂ. 02): ಎಚ್ಡಿ ದೇವೇಗೌಡ ರು ಕರುನಾಡು ಕಂಡ ವಿಶಿಷ್ಟ ರಾಜಕಾರಣಿ. ದೇವೇಗೌಡ್ರ ರಾಜಕೀಯ ಬದುಕಿಗೆ ಈಗ ಸುವರ್ಣ ಸಂಭ್ರಮ. ಹಳ್ಳಿಯ ಯುವಕನೊಬ್ಬ 29 ನೇ ವಯಸ್ಸಿಗೆ ಶಾಸಕನಾಗಿ, 39 ನೇ ವಯಸ್ಸಿಗೆ ವಿರೋಧ ಪಕ್ಷ ನಾಯಕನಾಗಿ, 50 ನೇ ವಯಸ್ಸಿಗೆ ಮಂತ್ರಿಯಾಗಿ 58 ನೇ ವಯಸ್ಸಿಗೆ ಸಂಸದನಾಗಿ, 61 ನೇ ವಯಸ್ಸಿಗೆ ಮುಖ್ಯಮಂತ್ರಿಯಾಗಿ, 63 ನೇ ವಯಸ್ಸಿಗೆ ಪ್ರಧಾನಿಯಾಗಿರುವುದು ಜನತಂತ್ರದ ಸೊಗಸಷ್ಟೇ ಅಲ್ಲ, ಅದೊಂದು ರೋಚಕ ಸಾಹಸಗಾಥೆ.
ಶೇ. 63 ರಷ್ಟು ಜನರಿಗೆ ಮೋದಿಯೇ ಸೂಪರ್ ಹೀರೋ, 2 ವರ್ಷ, 2 ಮಹಾಸಾಧನೆ!