
ಶಾಲೆಗಿಂತ ಧಾರ್ಮಿಕ ಕೇಂದ್ರ ಡೇಂಜರ್: ಸರ್ಕಾರದ ಮುಂದೆ ತಜ್ಞರ ಕಳವಳ
ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನ ಆರಂಭಿಸಲು ಕೇಂದ್ರ ಸರ್ಕಾರ ಅವಕಾಶ| ಇಂತಹ ಸಂದರ್ಭದಲ್ಲಿ ಮಂದಿರ, ಮಸೀದಿ, ಚರ್ಚ್ಗಳನ್ನ ತೆರೆದರೆ ಅಪಾಯ ಹೆಚ್ಚಾಗಲಿದೆ ಎಂದು ಕೊರೋನಾ ಟಾಸ್ಕ್ ಪೋರ್ಸ್ ತಂಡ ಎಚ್ಚರಿಕೆ|
ಬೆಂಗಳೂರು(ಜೂ.05): ಜೂನ್ 8 ರಿಂದ ರಾಷ್ಟ್ರಾದ್ಯಂತ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನ ಆರಂಭಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸುತ್ತಿದೆ. ಆದರೂ ಕೂಡ ಅಂತಿಮ ನಿರ್ಧಾರ ತೆಗೆದುಕೊಳ್ಳೋದು ಮಾತ್ರ ರಾಜ್ಯ ಸರ್ಕಾರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಧಾರ್ಮಿಕ ಕೇಂದ್ರಗಳ ರೀ ಓಪನ್ ಡೇಂಜರ್.. ಡೇಂಜರ್..! ಟಾಸ್ಕ್ ಫೋರ್ಸ್ ತಜ್ಞರ ಕಳವಳ
ಆದರೆ, ಇಂತಹ ಸಂದರ್ಭದಲ್ಲಿ ಮಂದಿರ, ಮಸೀದಿ, ಚರ್ಚ್ಗಳನ್ನ ತೆರೆದರೆ ಅಪಾಯ ಹೆಚ್ಚಾಗಲಿದೆ ಎಂದು ಕೊರೋನಾ ಟಾಸ್ಕ್ ಪೋರ್ಸ್ ತಂಡ ಎಚ್ಚರಿಕೆ ಕರೆ ಘಂಟೆ ನೀಡಿದೆ ಇದರಿಂದ ಕೊರೋನಾ ಪ್ರಕರಣಗಳು ಮತ್ತಷ್ಟು ಹೆಚ್ಚಬಹುದು ಎಂದು ಎಚ್ಚರಿಕೆ ನೀಡಿದೆ.