Asianet Suvarna News Asianet Suvarna News

ಗೋಣಿ ಚೀಲದಲ್ಲಿ ತಂದು ಹಣ ಹಂಚುವುದು ಕಾಂಗ್ರೆಸ್ ಸಂಸ್ಕೃತಿ, ನಮ್ಮದಲ್ಲ: ಸಿಎಂ ಬೊಮ್ಮಾಯಿ

ಬಿಜೆಪಿಯವರು ಹಣ ಹಂಚುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಸಿಎಂ ಉತ್ತರಿಸಿದ್ಧಾರೆ. 

ಬೆಂಗಳೂರು (ಅ. 24): ಬಿಜೆಪಿಯವರು ಹಣ ಹಂಚುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯ (Siddaramaiah) ಆರೋಪಕ್ಕೆ ಸಿಎಂ ಉತ್ತರಿಸಿದ್ಧಾರೆ. 

ಸಿಂದಗಿ ಸಮರ ಗೆಲ್ಲಲು ಸಿಎಂ ಬೊಮ್ಮಾಯಿ ರಣತಂತ್ರ..!

' ನಮಗೆ ಜನರ ಪ್ರೀತಿ, ವಿಶ್ವಾಸವಿದೆ. ಹಣದ ಅವಶ್ಯತೆ ಇಲ್ಲ. ಏನೇ ಇದ್ದರೂ ಹಣ ಹಂಚುವ ಸಂಸ್ಕೃತಿ ಕಾಂಗ್ರೆಸ್ ಸಂಸ್ಕೃತಿ. ಗೋಣಿಚೀಲದಲ್ಲಿ ತಂದು ಹಂಚುತ್ತಾರೆ. ಚುನಾವಣಾ ಬಳಿಕ ಸಿದ್ದರಾಮಣ್ಣ ಹಣ ಬಲ, ತೋಳ್ಬಲದಿಂದ ಬಿಜೆಪಿಯವರು ಗೆದ್ದಿದ್ದಾರೆ ಎನ್ನುತ್ತಿದ್ರು. ಚುನಾವಣೆಗೆ ಮುನ್ನವೇ ಹತಾಶರಾಗಿದ್ದಾರೆ. ಸಿಂದಗಿಯಲ್ಲಿ ಜನ ಬಿಜೆಪಿ ಪರ ಇರುವುದು ಗೊತ್ತಾಗಿದೆ' ಎಂದು ಬೊಮ್ಮಾಯಿ ಹೇಳಿದ್ದಾರೆ.