Asianet Suvarna News Asianet Suvarna News

ಮಹದಾಯಿ ವಿಚಾರದಲ್ಲಿ ಗೋವಾ ಪರ ದಿನೇಶ್‌ ಬೆಂಬಲ?: ಗುಂಡೂರಾವ್‌ ಪ್ರತಿಕ್ರಿಯೆ

ಸುಪ್ರೀಂ ಕೋರ್ಟ್‌ನಿಂದ ಯಾವ ತೀರ್ಪು ಬರುತ್ತದೋ ಅದನ್ನ ಎಲ್ಲ ರಾಜಕೀಯ ಪಕ್ಷಗಳು ಒಪ್ಪಬೇಕು: ದಿನೇಶ್‌ ಗುಂಡೂರಾವ್‌| ಗೋವಾ ಕಾಂಗ್ರೆಸ್‌ ನಿರ್ಣಯಕ್ಕೆ ದಿನೇಶ್‌ ಗುಂಡೂರಾವ್‌ ಬೆಂಬಲ: ಗೋವಾ ಕಾಂಗ್ರೆಸ್‌ ನಾಯಕ ದಿಗಂಬರ್ ಕಾಮತ್|  

ಬೆಂಗಳೂರು(ನ.01): ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಮಧ್ಯೆ ಇರುವ ಮಹಾದಾಯಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನಿಂದ ಯಾವ ತೀರ್ಪು ಬರುತ್ತದೋ ಅದನ್ನ ಎಲ್ಲ ರಾಜಕೀಯ ಪಕ್ಷಗಳು ಒಪ್ಪಬೇಕು ಎಂದು ಗೋವಾ ಕಾಂಗ್ರೆಸ್‌ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. 

ನನ್ನ ಜೀವನ ಮುಗಿಸುವ ಹಂತಕ್ಕೂ ಹೋಗಿದ್ದೆ: ಡಿ. ಕೆ. ರವಿ ಪತ್ನಿ ಬಿಚ್ಚಿಟ್ಟ ರಹಸ್ಯ!

ಗೋವಾ ಕಾಂಗ್ರೆಸ್‌ ನಿರ್ಣಯಕ್ಕೆ ದಿನೇಶ್‌ ಗುಂಡೂರಾವ್‌ ಬೆಂಬಲ ವ್ಯಕ್ತಪಡಿಸುತ್ತಾರೆ ಎಂಬ ಗೋವಾ ಕಾಂಗ್ರೆಸ್‌ ನಾಯಕ ದಿಗಂಬರ್ ಕಾಮತ್‌ ಹೇಳಿಕೆಗೆ ದಿನೇಶ್‌ ಗುಂಡೂರಾವ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.