Asianet Suvarna News Asianet Suvarna News

ತಾಲಿಬಾನ್ ವಶಕ್ಕೆ ಅಫ್ಘಾನ್, ಧಾರವಾಡದಲ್ಲಿ ವಿದ್ಯಾರ್ಥಿಗಳ ಕಣ್ಣೀರು.!

ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದೆ. ತಾಲಿಬಾನಿಯರ ಅಟ್ಟಹಾಸಕ್ಕೆ ನಾಗರೀಕರು ನಲುಗಿ ಹೋಗಿದ್ದಾರೆ. ಧಾರವಾಡ ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ದೇಶದ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. 

ಬೆಂಗಳೂರು (ಆ. 17): ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದೆ. ತಾಲಿಬಾನಿಯರ ಅಟ್ಟಹಾಸಕ್ಕೆ ನಾಗರೀಕರು ನಲುಗಿ ಹೋಗಿದ್ದಾರೆ. ಧಾರವಾಡ ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ದೇಶದ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. 15 ವಿದ್ಯಾರ್ಥಿಗಳಲ್ಲಿ 5 ಜನ ವಿದ್ಯಾರ್ಥಿಗಳು ಅಫ್ಘಾನಿಸ್ತಾನಕ್ಕೆ ವಾಪಸ್ಸಾಗಿದ್ದಾರೆ. 10 ವಿದ್ಯಾರ್ಥಿಗಳನ್ನು ಇಲ್ಲಿನ ಹಾಸ್ಟೆಲ್‌ನಲ್ಲಿಯೇ ಉಳಿದಿದ್ದಾರೆ. 'ನಮ್ಮ ಕುಟುಂಬದ ಜೊತೆ ಮಾತನಾಡಿದ್ದೇವೆ. ಅವರು ಸುರಕ್ಷಿತವಾಗಿದ್ದಾರೆ' ಎಂದಿದ್ದಾರೆ. 

'ಅಫ್ಘಾನ್ ಸೈನಿಕರೇ ದೇಶ ಉಳಿಸಿಕೊಳ್ಳಲು ಹೋರಾಡಲಿಲ್ಲ, ನಮ್ಮ ಸೈನಿಕರೇಕೆ ಬಲಿಯಾಗಬೇಕು?'

Video Top Stories