ಸುಜಾತಾ ಭಟ್ ಕಣ್ಣೀರು ನೋಡಿ ವಿಡಿಯೋ ಮಾಡ್ದೆ, ಸುಳ್ಳಾದ್ರೆ ನಾನೇನು ಮಾಡ್ಲಿ, ಸಮೀರ್ ಹೊಸ ರಾಗ

ಸುಜಾತಾ ಭಟ್ ಕಣ್ಣೀರು ನೋಡಿ ವಿಡಿಯೋ ಮಾಡ್ದೆ, ಧರ್ಮಸ್ಥಳ ವಿರುದ್ಧ ಎಐ ಮೂಲಕ ವಿಡಿಯೋ ಮಾಡಿ ಅಪಪ್ರಚಾರ ಮಾಡಿದ ಧೂತ ಸಮೀರ್ ಎಂಡಿ ಇದೀಗ ಎಸ್ಐಟಿ ವಿಚಾರಣೆಯಲ್ಲಿ ತನ್ನೇದೇನು ತಪ್ಪಿಲ್ಲ ಎಂದು ಕ್ಲಿನ್ ಚಿಟ್ ಕೊಟ್ಟಿದ್ದಾನೆ. ಇಷ್ಟೇ ಅಲ್ಲ ಹೊಸ ವರಸೆ ಶುರು ಮಾಡಿದ್ದಾನೆ.

Share this Video
  • FB
  • Linkdin
  • Whatsapp

ಧರ್ಮಸ್ಥಳ (ಸೆ.13) ಧರ್ಮಸ್ಥಳ ವಿರುದ್ದ ಸುಳ್ಳು ಆರೋಪಗಳು, ಬುರುಡೆ ತೋರಿಸಿ ಹೊಸ ಕತೆ ಸೃಷ್ಟಿಸಿದವರೆಲ್ಲಾ ಇದೀಗ ಎಸ್ಐಟಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪೈಕಿ ಧೂತ ಸಮೀರ್ ಎಂಡಿ ಧರ್ಮಸ್ಥಳ ವಿರುದ್ದ ಎಐ ವಿಡಿಯೋ ಸೃಷ್ಟಿಸಿ ಇಲ್ಲ ಸಲ್ಲದ ಆರೋಪ ಮಾಡಿದ್ದ. ಈತನ ವಿಡಿಯೋವನ್ನು ಹಲವರು ನಂಬಿ ಧರ್ಮಸ್ಥಳ ವಿರುದ್ಧ ಹೋರಾಟಕ್ಕಿಳಿದಿದ್ದರು. ಇದೀಗ ಸಮೀರ್ ಎಂಡಿ ಸುಜಾತಾ ಭಟ್ ಹೇಳಿದ ಕತೆ ಸುಳ್ಳಾದರೆ ನಾನೇನು ಮಾಡಲಿ ಎಂದು ಹೊಸ ರಾಗ ಹಾಡಿದ್ದಾನೆ. ಅನನ್ಯಾ ಭಟ್ ಕೊಲೆ ಎಂದಿದ್ದ ಸಮೀರ್ ಇದೀಗ ಹೊಸ ಕತೆ ಹೇಳುತ್ತಿದ್ದಾನೆ. ಸುಜಾತಾ ಭಟ್ ಕಣ್ಣೀರು ಹಾಕಿದ್ದರು. ಅವರಿಗೆ ನ್ಯಾಯ ಒದಗಿಸಲು ವಿಡಿಯೋ ಮಾಡಿದ್ದೆ. ಆದರೆ ಅವರ ಕತೆ ಸುಳ್ಳಾಗಿದ್ದರೆ ನಾನು ಏನು ಮಾಡಲಿ ಎಂದಿದ್ದಾನೆ.

Add Asianetnews Kannada as a Preferred SourcegooglePreferred

Related Video