ಸಿದ್ದರಾಮಯ್ಯ ಟೀಕಿಸುವ ಭರದಲ್ಲಿ ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ!
ಹೆದ್ದಾರಿ ಜಟಾಪಟಿಯಲ್ಲಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಸಿಟಿ ರವಿ ವಿವದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಮಾ.6): ಹೆದ್ದಾರಿ ಜಟಾಪಟಿಯಲ್ಲಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಸಿಟಿ ರವಿ ವಿವದಾತ್ಮಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಒಂದೇ ಒಂದು ರೂಪಾಯಿ ಅನುದಾನ ನೀಡಿಲ್ಲ. ಉರಲ್ಲಿರುವ ಮಕ್ಕಳೆಲ್ಲರೂ ನನ್ನವು ಅಂತೇಳಿದ್ರೆ.... ಊರಿನವರು ಕಾಲಲ್ಲಿ ಇರೋದನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾರೆ. ಸುಳ್ಳು ಮತ್ತು ಸಿದ್ದರಾಮಯ್ಯ ಒಂದು ನಾಣ್ಯದ ಎರಡು ಮುಖಗಳೂ. ದಶಪಥ ಹೆದ್ದಾರಿಗೆ ಹಣ ಕೊಟ್ಟಿರೋರು ಮೋದಿ ಸಿದ್ದರಾಮಯ್ಯ ತನ್ನ ಹೆಸರು ಹಾಕಿಕೊಳ್ಳಲು ಹೊರಟಿದ್ದಾರೆ. ಇದು ಯಾವ ಟಿಎನ್ ಎ ಪರೀಕ್ಷೆಯಲ್ಲೂ ಪಾಸ್ ಆಗಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.