Asianet Suvarna News Asianet Suvarna News

ರಾಜ್ಯದಲ್ಲಿ ಕೇವಲ 11 ದಿನಗಳಲ್ಲಿ ಕೊರೋನಾ ಸೋಂಕು ಡಬಲ್..!

ಲಾಕ್‌ಡೌನ್ ಸಡಿಲಿಕೆಯಾಗಿದೆ ಅಷ್ಟೇ ಆದರೆ ಕೊರೋನಾ ಹೋಗಿಲ್ಲ. ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಸುದ್ದಿಯೊಂದನ್ನು ಸುವರ್ಣ ನ್ಯೂಸ್ ಹೊರಗೆಡವಿದೆ. ಮೇ ಅಂತ್ಯ ಹಾಗೂ ಜೂನ್ ಹೊತ್ತಿಗೆ ಇನ್ನಷ್ಟು ಪ್ರಕರಣಗಳು ಹೆಚ್ಚಾಗಲಿವೆ ಎಂದು ಸಚಿವರೊಬ್ಬರು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು(ಮೇ.22): ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ರಣಕೇಕೆ ಈಗಾಗಲೇ ಜನರನ್ನು ಬೆಚ್ಚಿ ಬೀಳಿಸಿದೆ. ಆದರೆ ಕೊರೋನಾ ಹಾವಳಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಮಹಾಮಾರಿಯ ದರ್ಶನ ಆಗುವುದು ಖಚಿತ.

ಲಾಕ್‌ಡೌನ್ ಸಡಿಲಿಕೆಯಾಗಿದೆ ಅಷ್ಟೇ ಆದರೆ ಕೊರೋನಾ ಹೋಗಿಲ್ಲ. ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಸುದ್ದಿಯೊಂದನ್ನು ಸುವರ್ಣ ನ್ಯೂಸ್ ಹೊರಗೆಡವಿದೆ. ಮೇ ಅಂತ್ಯ ಹಾಗೂ ಜೂನ್ ಹೊತ್ತಿಗೆ ಇನ್ನಷ್ಟು ಪ್ರಕರಣಗಳು ಹೆಚ್ಚಾಗಲಿವೆ ಎಂದು ಸಚಿವರೊಬ್ಬರು ಮಾಹಿತಿ ಬಿಚ್ಚಿಟ್ಟಿದ್ದಾರೆ.

ದೇಶದಲ್ಲಿ ದಾಖಲೆಯ 5 700 ಜನರಿಗೆ ಕೊರೋನಾ ಸೋಂಕು..!

ಕೇವಲ 11 ದಿನಕ್ಕೆ ಡಬಲ್ ಆಗ್ತಿದೆ ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಕೇಸ್. ಈ ವಿಚಾರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹಂಚಿಕೊಂಡಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.