Asianet Suvarna News Asianet Suvarna News

ಸೋಂಕಿತ ಗರ್ಭಿಣಿ ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ ತಡೆದ ಪುಂಡ; ಗರ್ಭಿಣಿಯನ್ನು ಇಳಿಸಿ ಪುಂಡಾಟ

ಕೊರೊನಾ ವಾರಿಯರ್ಸ್‌ ಮೇಲೆ ಪದೇ ಪದೇ ಹಲ್ಲೆ, ಅವರಿಗೆ ರಕ್ಷಣೆ ಇಲ್ಲದಿರುವ ಘಟನೆ ಪದೇ ಪದೇ ಮರುಕಳಿಸುತ್ತಿದೆ. ಚಿಕ್ಕೋಡಿಯಲ್ಲಿ ಸೋಂಕಿತ ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಸಿಬ್ಬಂದಿಯನ್ನು ತಡೆ ಹಿಡಿಯಲಾಗಿದೆ. ಆಂಬುಲೆನ್ಸ್ ತಡೆದು ಕರೆದುಕೊಂಡು ಹೋಗದಂತೆ ಧಮ್ಕಿ ಹಾಕಲಾಗಿದೆ. 

ಬೆಂಗಳೂರು (ಜು. 27): ಕೊರೊನಾ ವಾರಿಯರ್ಸ್‌ ಮೇಲೆ ಪದೇ ಪದೇ ಹಲ್ಲೆ, ಅವರಿಗೆ ರಕ್ಷಣೆ ಇಲ್ಲದಿರುವ ಘಟನೆ ಪದೇ ಪದೇ ಮರುಕಳಿಸುತ್ತಿದೆ. ಚಿಕ್ಕೋಡಿಯಲ್ಲಿ ಸೋಂಕಿತ ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಸಿಬ್ಬಂದಿಯನ್ನು ತಡೆ ಹಿಡಿಯಲಾಗಿದೆ. ಆಂಬುಲೆನ್ಸ್ ತಡೆದು ಕರೆದುಕೊಂಡು ಹೋಗದಂತೆ ಧಮ್ಕಿ ಹಾಕಲಾಗಿದೆ. 

ಗರ್ಭಿಣಿಯನ್ನು ಆರೋಗ್ಯ ಸಿಬ್ಬಂದಿ ಬೆಳಗಾವಿಗೆ ಶಿಫ್ಟ್ ಮಾಡುತ್ತಿದ್ದರು. ಆಂಬುಲೆನ್ಸ್ ತಡೆದು ಗರ್ಭಿಣಿಯನ್ನು ಇಳಿಸಿ ನಿಪ್ಪಾಣಿಯಲ್ಲಿಯೇ ಹೆರಿಗೆ ಮಾಡಿಸುವಂತೆ ವೈದ್ಯರನ್ನು ಪುಂಡನೊಬ್ಬ ತಳ್ಳಿದ್ದಾನೆ.  ಆರೋಗ್ಯ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾನೆ. ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.