ಮುಸ್ಲಿಂ ಅಂಗಡಿಗಳ ತೆರವು ಹೀನ ಕೃತ್ಯ, ಸರ್ಕಾರ ಕ್ರಮ ಕೈಗೊಳ್ಳಬೇಕು: ಎಚ್‌ಡಿಕೆ ಒತ್ತಾಯ

ಮುಸ್ಲಿಂ ಅಂಗಡಿಗಳ ತೆರವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. 'ಹಿಂದೂ ಸಂಘಟನೆಗಳ ಹೆಸರಲ್ಲಿ ಹೀನ ಕೃತ್ಯ ಎಸಗುತ್ತಿದ್ದಾರೆ. ಇಂತಹ ಕೃತ್ಯಗಳು ಖಂಡನೀಯ: ಎಚ್‌ಡಿ ಕುಮಾರಸ್ವಾಮಿ

Share this Video
  • FB
  • Linkdin
  • Whatsapp

ಬೆಂಗಳೂರು (ಏ. 10): ಮುಸ್ಲಿಂ ಅಂಗಡಿಗಳ ತೆರವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. 'ಹಿಂದೂ ಸಂಘಟನೆಗಳ ಹೆಸರಲ್ಲಿ ಹೀನ ಕೃತ್ಯ ಎಸಗುತ್ತಿದ್ದಾರೆ. ಇಂತಹ ಕೃತ್ಯಗಳು ಖಂಡನೀಯ. ಇಂತವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಸಾಮರಸ್ಯ ಕದಡುವವರು ರೌಡಿಗಳು. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕುಮಾರಸ್ವಾಮಿಯವರು, ಸಿಎಂ ಬೊಮ್ಮಾಯಿಗೆ ಒತ್ತಾಯಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರುನಾಡಲ್ಲಿ ಆರದ ಧರ್ಮದ ದಂಗಲ್, ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಸದ್ದು...!

ದೇವಸ್ಥಾನದ ಆವರಣದಲ್ಲಿರುವ ಹಿಂದೂಯೇತರ ಅಂಗಡಿಗಳನ್ನು ತೆರವುಗೊಳಿಸುವ ಅಭಿಯಾನ ಇದೀಗ ಧಾರವಾಡದಲ್ಲಿ ತೀವ್ರ ಬಿಸಿ ಪಡೆದುಕೊಂಡಿದ್ದು, ಇಲ್ಲಿಯ ಪ್ರತಿಷ್ಠಿತ ನುಗ್ಗಿಕೇರಿ ಹನುಮಂತನ ದೇವಸ್ಥಾನದ ಆವರಣದಲ್ಲಿನ ನಾಲ್ಕು ಮುಸ್ಲಿಂ ಅಂಗಡಿಗಳನ್ನು ಶನಿವಾರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಕ್ಷಕಶಃ ಧ್ವಂಸ ಮಾಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

Related Video