
Kodimutt Shree Predicts ಕೊರೋನಾ, ಭೂಕಂಪ ಆಯ್ತು, ಕಾದಿದೆ ಗಾಳಿ ಗಂಡಾಂತರ: ಕೋಡಿಶ್ರೀ ಭವಿಷ್ಯ
ಜನರಿಗೆ ಬುದ್ಧಿ ಕಲಿಸಲು ಕೊರೋನಾ ಬಂತು, ಜಲಗಂಡಾಂತರವೂ ಬಂದು ಹೋಗಿದೆ. ಮುಂದೆ ರಾಜ್ಯವನ್ನು ಗಾಳಿ ಗಂಡಾಂತರವೂ ಜನರನ್ನು ಕಾಡಲಿದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರ, (ಫೆ.12): ಜನರಿಗೆ ಬುದ್ಧಿ ಕಲಿಸಲು ಕೊರೋನಾ ಬಂತು, ಜಲಗಂಡಾಂತರವೂ ಬಂದು ಹೋಗಿದೆ. ಮುಂದೆ ರಾಜ್ಯವನ್ನು ಗಾಳಿ ಗಂಡಾಂತರವೂ ಜನರನ್ನು ಕಾಡಲಿದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Omicron and Politics: ಒಮಿಕ್ರಾನ್, ರಾಜಕೀಯ ತಲ್ಲಣದ ಬಗ್ಗೆ ಕೋಡಿಹಳ್ಳಿ ಶ್ರೀಗಳ ಸ್ಪೋಟಕ ಭವಿಷ್ಯ
ಚಿಕ್ಕಬಳ್ಳಾಪುರ ನಗರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಶ್ರೀಗಳು ಸುದ್ದಿಗಾರರ ಜೊತೆ ಮಾತನಾಡಿ, ಗಾಳಿ ಗಂಡಾಂತರವೂ ಮನುಷ್ಯನಿಗೆ ಅಪಾಯಕಾರಿ ತಂದೊಡ್ಡಲಿದೆ. ಗಾಳಿ ಗಂಡಾಂತರ ಹೋಗುವ ಕಾಲಕ್ಕೆ ವಿಪರೀತ ಬರಗಾಲವನ್ನು ತಂದು ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದ ಸ್ಥಿತಿ ತಂದೊಡ್ಡಲಿದೆ ಎಂದು ಹೇಳಿದರು.