
ಈದ್ಗಾ ಮೈದಾನ ಉಳಿವಿಗಾಗಿ ನಾಗರೀಕರಿಂದ ಈಗ ಹೊಸ ಅಭಿಯಾನ!
ಚಾಮರಾಜಪೇಟೆ ಈದ್ಗಾ ಮೈದಾನಕ್ಕಾಗಿ ನಾಗರೀಕ ಒಕ್ಕೂಟ ಪಟ್ಟು ಹಿಡಿದಿದೆ. ಈ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸುವ ತನಕ ಹೋರಾಟ ನಡೆಸುತ್ತೇವೆ ಎಂದು 50 ಸಾವಿರ ಜನರ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಹಿ ಸಂಗ್ರಹ ಪ್ರತಿಯನ್ನು ಸಿಎಂ ಹಾಗೂ ರಾಜ್ಯಪಾಲರಿಗೆ ಕೊಡಲು ಮುಂದಾಗಿದ್ದಾರೆ.
ಬೆಂಗಳೂರು (ಜು. 20): ಚಾಮರಾಜಪೇಟೆ ಈದ್ಗಾ ಮೈದಾನಕ್ಕಾಗಿ ನಾಗರೀಕ ಒಕ್ಕೂಟ ಪಟ್ಟು ಹಿಡಿದಿದೆ. ಈ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸುವ ತನಕ ಹೋರಾಟ ನಡೆಸುತ್ತೇವೆ ಎಂದು 50 ಸಾವಿರ ಜನರ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಹಿ ಸಂಗ್ರಹ ಪ್ರತಿಯನ್ನು ಸಿಎಂ ಹಾಗೂ ರಾಜ್ಯಪಾಲರಿಗೆ ಕೊಡಲು ಮುಂದಾಗಿದ್ದಾರೆ.
ಅಂದು ಎಸ್ಎಂ ಕೃಷ್ಣ, ಈಗ ಡಿಕೆ ಶಿವಕುಮಾರ್, ಒಂದೇ ಮಾತಿನಲ್ಲಿ ಕನಸು ಬಿಚ್ಚಿಟ್ಟ ಡಿಕೆ
ಚಾಮರಾಜಪೇಟೆಯ ಆಟದ ಮೈದಾನ ಸರ್ಕಾರದ ಸ್ವತ್ತಾಗಿಯೇ ಉಳಿಯಬೇಕು. ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರು ನಾಮಕಾರಣ ಮಾಡಬೇಕು ಎಂದು ಆಗ್ರಹಿಸಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಈಗಾಗಲೇ ಬಂದ್ ಕೂಡಾ ನಡೆಸಿದೆ. ಈ ಬಂದ್ಗೆ ಉತ್ತಮ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ.