Asianet Suvarna News Asianet Suvarna News

ಕರ್ನಾಟಕದಲ್ಲಿ ಅನ್‌ಲಾಕ್‌ 4.0: ಮತ್ತಷ್ಟು ರಿಲೀಫ್‌..!

* ಅನ್‌ಲಾಕ್‌ 4.೦ ಜಾರಿಗೆ ರಾಜ್ಯ ಸರ್ಕಾರ ಚಿಂತನೆ 
* ಯಡಿಯೂರಪ್ಪ ನೇತೃತ್ವದಲ್ಲಿ ಅನ್‌ಲಾಕ್‌ ಸಭೆ 
* ಜು.19ರಿಂದ ರಾಜ್ಯದಲ್ಲಿ ಅನ್‌ಲಾಕ್‌ 4.೦ ಜಾರಿಯಾಗುವ ಸಾಧ್ಯತೆ 

ಬೆಂಗಳೂರು(ಜು.15): ಕೊರೋನಾ 3ನೇ ಅಲೆ ಆತಂಕದ ನಡುವೆಯೇ ರಾಜ್ಯದಲ್ಲಿ ಮತ್ತಷ್ಟು ರಿಲೀಫ್‌ ಸಿಗುವ ಸಾಧ್ಯತೆ ಇದೆ. ಅನ್‌ಲಾಕ್‌ 4.೦ ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಇಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಅನ್‌ಲಾಕ್‌ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪರಿಸ್ಥಿತಿಯನ್ನ ಸಿಎಂ ಬಿಎಸ್‌ವೈ ಅವಲೋಕಿಸಲಿದ್ದಾರೆ. ಜು.19ರಿಂದ ರಾಜ್ಯದಲ್ಲಿ ಅನ್‌ಲಾಕ್‌ 4.೦ ಜಾರಿಯಾಗುವ ಸಾಧ್ಯತೆ ಇದೆ. 

ತಿಂದವರೇ ಬಲ್ಲವರು ಕಲ್ಲು ಲಾಂಬಿನ ರುಚಿ; ಹುಡುಕುವುದು ಮಾತ್ರ ಸವಾಲೇ ಸರಿ!