Asianet Suvarna News Asianet Suvarna News

ಕರಾವಳಿ ಜಿಲ್ಲೆಗಳ ಮೇಲೆ ನಿಸರ್ಗ ಚಂಡಮಾರುತದ ಎಫೆಕ್ಟ್‌: ಸಮುದ್ರದಲ್ಲಿ ಮುಳುಗಿದ ಬೋಟ್‌

ಭಾರೀ ಗಾತ್ರದ ಅಲೆಗಳಿಂದಾಗಿ ಸಮುದ್ರದಲ್ಲಿ ಮುಳುಗಿದ ಬೋಟ್‌ಗಳು| ದುರ್ಗಾ, ಹನುಮ ಹೆಸರಿನ ಯಾಂತ್ರಿಕ ದೋಣಿಗಳು ಮುಳುಗಡೆ| ಬೋಟ್‌ಗಳಲ್ಲಿದ್ದ 8 ಮೀನುಗಾರರ ರಕ್ಷಣೆ| ಕರಾವಳಿಯಾದ್ಯಂತ ಹೆಚ್ಚಾದ ಕಡಲಿನ ಅಬ್ಬರ| 

ಕಾರವಾರ(ಜೂ.03): ನಿಸರ್ಗ ಚಂಡಮಾರುತದಿಂದ ಉಂಟಾದ ಭಾರೀ ಗಾತ್ರದ ಅಲೆಗಳಿಂದಾಗಿ ಸಮುದ್ರದಲ್ಲಿ ಬೋಟ್‌ಗಳು ಮುಳುಗಿದ ಘಟನೆ ಗೋವಾದಲ್ಲಿ ನಡೆದಿದೆ. ದುರ್ಗಾ, ಹನುಮ ಹೆಸರಿನ ಯಾಂತ್ರಿಕ ದೋಣಿಗಳು ಮುಳುಗಡೆಯಾಗಿವೆ. ಈ ವೇಳೆ ಬೋಟ್‌ಗಳಲ್ಲಿದ್ದ 8 ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. 

ಕೊರೊನಾ ಭೀತಿ ನಡುವೆಯೇ ಶಾಲೆಗಳನ್ನು ಆರಂಭಿಸಬೇಕಾ? ಚಿತ್ರನಟ ಪ್ರೇಮ್ ಹೇಳುವುದಿದು..!

ನಿಸರ್ಗ ಚಂಡಮಾರುತದಿಂದ ಕರವಾಳಿ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕರಾವಳಿಯಾದ್ಯಂತ ಕಡಲಿನ ಅಬ್ಬರ ಹೆಚ್ಚಾಗಿದೆ. ಭಾರೀ ಪ್ರಮಾಣದಲ್ಲಿ ಏಳುತ್ತಿರುವ ಅಲೆಗಳಿಂದಾಗಿ ಮೀನುಗಾರರು ಕಂಗೆಟ್ಟಿದ್ದಾರೆ. 
 

Video Top Stories