Asianet Suvarna News Asianet Suvarna News

ಸಾರಿಗೆ ಸಮರ ಸುಖಾಂತ್ಯ; ರಸ್ತೆಗಿಳಿದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ;

ಸಾರಿಗೆ ನೌಕರರು ಹಾಗೂ ಸರ್ಕರದ ನಡುವಿನ ಹಗ್ಗ ಜಗ್ಗಾಟ ಮುಕ್ತಾಯಗೊಂಡಿದೆ. ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಲಿಖಿತ ಭರವಸೆ ನೀಡಿದೆ. 

ಬೆಂಗಳೂರು (ಡಿ. 15): ಸಾರಿಗೆ ನೌಕರರು ಹಾಗೂ ಸರ್ಕರದ ನಡುವಿನ ಹಗ್ಗ ಜಗ್ಗಾಟ ಮುಕ್ತಾಯಗೊಂಡಿದೆ. ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಲಿಖಿತ ಭರವಸೆ ನೀಡಿದೆ. 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಸೇರಿ ಹಾಲಿ ಭರವಸೆಗಳ ಅನುಷ್ಠಾನಕ್ಕೆ ಸಾರಿಗೆ ನೌಕರರ ಒಕ್ಕೂಟ 3 ತಿಂಗಳ ಗಡುವು ವಿಧಿಸಿದೆ.

ಸಾರಿಗೆ ಸಮರ ಅಂತ್ಯ, ಕರ್ತವ್ಯಕ್ಕೆ ಹಾಜರಾದ ನೌಕರರು, ನಿರಾಳರಾದ ಪ್ರಯಾಣಿಕರು

ಸರ್ಕಾರ ಭರವಸೆಗಳನ್ನು ಈಡೇರಿಸದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿವೆ. ಇಂದಿನಿಂದ ಎಂದಿನಂತೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿದಿವೆ. ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.