ಹಿಂದಿ ಭಾಷಾ ವಿಚಾರ, ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ದ್ವಂದ್ವ ಹೇಳಿಕೆ

ಹಿಂದಿ ಭಾಷೆ ವಿಚಾರದಲ್ಲಿ ಮಾತನಾಡಿರುವ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಕೇಂದ್ರ ಸರ್ಕಾರ ಯಾವುದರ ಪರವಾಗಿ ಇರುತ್ತದೆಯೂ ನಾವು ಅದರ ಪರ ಇರುತ್ತೇವೆ ಎಂದು ಹೇಳುವ ಮೂಲಕ ದ್ವಂದ್ವ ಹೇಳಿಕೆ ನೀಡಿದ್ದಾರೆ.
 

Share this Video
  • FB
  • Linkdin
  • Whatsapp

ವಿಜಯಪುರ (ಏ.28): ನಟ ಸುದೀಪ್ (Sudeep), ಅಜಯ್ ದೇವಗನ್ (Ajay Devgn) ಹಿಂದಿ ಭಾಷೆ ವಾರ್ ವಿಚಾರ ವಿಜಯಪುರದಲ್ಲಿ (Vijayapura) ಸಂಸದ ರಮೇಶ ಜಿಗಜಿಣಗಿ (Ramesh Jigajinagi ) ಹೇಳಿಕೆ ನೀಡಿದ್ದು, ನಾನು ಇಬ್ಬರು ಪರವಾಗಿ ಇಲ್ಲ, ಸರ್ಕಾರದ ನೀತಿ ಪರವಾಗಿ ಇದೇನಿ ಎಂದ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಭಾಷೆಯ ವಿಚಾರದಲ್ಲಿ ಬಿಜೆಪಿ ಸಂಸದರಲ್ಲಿ ಸ್ಪಷ್ಟತೆ ಇಲ್ಲ ಎನ್ನುವುದು ಜಿಗಜಿಣಗಿ ಮಾತಿನಿಂದ ಅರ್ಥವಾಗುತ್ತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಯಾರ ಪರವಾಗಿ ಇರುತ್ತದೋ ಆ ಕಡೆ ನಾವು ಇರಲೇಬೇಕಾಗುತ್ತದೆ ಎಂದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಸುದೀಪ್ ಪರ ಬೊಮ್ಮಯಿ ಬ್ಯಾಟಿಂಗ್..!

ಕೇಂದ್ರ ಸರ್ಕಾರದ ನಿರ್ಣಯಕ್ಕೆ ನಾನು ಬದ್ಧ. ಕೇಂದ್ರ ಹಿಂದಿ ಭಾಷೆ ಪರವಾಗಿದ್ದರೆ ನಾನು ಆ ಕಡೆ, ಅದೇ ಬೇರೆ ಭಾಷೆ ಪರವಾಗಿದ್ದರೆ ಆ ಕಡೆ ಇರುತ್ತೇನೆ. ಭಾಷೆ ವಿಚಾರವಾಗಿ ತಮಿಳುನಾಡು, ಮಹಾರಾಷ್ಟ್ರ ಸೇರಿ ಎಲ್ಲ ರಾಜ್ಯಗಳಲ್ಲಿ ಭಿನ್ನರಾಗವಿದೆ ಎಂದರು. ತಾವು ಕನ್ನಡದ ಪರವಾಗಿ ಇರುತ್ತೇನೆ ಎನ್ನುವ ಮಾತು ಅವರಿಂದ ಬಂದಿಲ್ಲ.

Related Video