Asianet Suvarna News Asianet Suvarna News

Big 3: ಹರಿಹರದ ರಸ್ತೆ ಸಂಪೂರ್ಣ ಕೆಸರುಮಯ: ಶ್ರೀರಾಮ ದರ್ಶನವೇ ದೊಡ್ಡ ಸವಾಲು

ದಾವಣಗೆರೆ ಜಿಲ್ಲೆಯಲ್ಲಿರುವ ಹರಿಹರವನ್ನು ದಕ್ಷಿಣದ ಕಾಶಿ ಎಂದು ಕರೆಯಲಾಗುತ್ತದೆ. ಇತ್ತೀಚಿಗೆ ಎಲ್ಲಾ ಮಠಗಳ ಕೇಂದ್ರಸ್ಥಾನವಾಗಿದ್ದು, ದೊಡ್ಡ ಆಧ್ಯಾತ್ಮಿಕ ತಾಣವಾಗಿ ಮಾರ್ಪಟ್ಟಿದೆ. ಹರಿಹರ ಪಟ್ಟಣಕ್ಕೆ ಹೊಂದಿಕೊಂಡು ಸುತ್ತೂರು ನಾರಾಯಣಾಶ್ರಮ, ಶ್ರೀರಾಮ ಮಂದಿರಕ್ಕೆ ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. 

ದಾವಣಗೆರೆ (ಆ. 03): ಜಿಲ್ಲೆಯಲ್ಲಿರುವ ಹರಿಹರವನ್ನು ದಕ್ಷಿಣದ ಕಾಶಿ ಎಂದು ಕರೆಯಲಾಗುತ್ತದೆ. ಇತ್ತೀಚಿಗೆ ಎಲ್ಲಾ ಮಠಗಳ ಕೇಂದ್ರಸ್ಥಾನವಾಗಿದ್ದು, ದೊಡ್ಡ ಆಧ್ಯಾತ್ಮಿಕ ತಾಣವಾಗಿ ಮಾರ್ಪಟ್ಟಿದೆ. ಹರಿಹರ ಪಟ್ಟಣಕ್ಕೆ ಹೊಂದಿಕೊಂಡು ಸುತ್ತೂರು ನಾರಾಯಣಾಶ್ರಮ, ಶ್ರೀರಾಮ ಮಂದಿರಕ್ಕೆ ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಎಲ್ಲಿಂದಲೋ ಹರಿಹರಕ್ಕೆ ಬರುವುದು ಪ್ರಯಾಸವಲ್ಲ ಆದರೆ ಹರಿಹರದಿಂದ ಶ್ರೀರಾಮ ಮಂದಿರಕ್ಕೆ ಬರುವುದು ಪ್ರಯಾಸದ ಅನುಭವ. ಇಲ್ಲಿನ ರಸ್ತೆ ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗಿರುತ್ತೆ. ಇದನ್ನು ದಾಟಿ ಹೋಗುವುದು ಸಾಹಸವೇ ಸರಿ. ಈ ಬಗ್ಗೆ ಬಿಗ್‌ 3 ಯಲ್ಲಿ ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಲಾಯಿತು. 

BIG 3 ಇಂಪ್ಯಾಕ್ಟ್: ಯಾದಗಿರಿ ನಂದೀಹಳ್ಳಿ ನೀರಿನ ಸಮಸ್ಯೆಗೆ ಪರಿಹಾರ