
ಸೋಂಕಿತನ ಶವಸಂಸ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು; ಮನೆ ಕಿಟಕಿ, ಗಾಜು ಪೀಸ್ ಪೀಸ್..!
ಕೊರೊನಾ ಸೋಂಕಿತನ ಶವಸಂಸ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು ನೋಡಿ..! ಸೋಂಕಿತರ ಅಂತ್ಯಕ್ರಿಯೆಯನ್ನು ಜನ ವಸತಿ ಇರುವ ಪ್ರದೇಶಗಳಲ್ಲೇ ಮಾಡಲಾಗುತ್ತಿತ್ತು. ಪಿಪಿಇ ಕಿಟ್ಗಳನ್ನು ಅಲ್ಲಿಯೇ ಎಸೆದು ಹೋಗಿದ್ದರು. ಇದರಿಂದ ಆತಂಕಗೊಂಡ ಸ್ಥಳೀಯ ನಿವಾಸಿಯೊಬ್ಬ ಸುದ್ದಿ ತಿಳಿಸಿದ್ದಾರೆ. ಇವರ ಮನೆ ಮುಂದೆ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮನೆ ಮುಂದಿದ್ದ ವಸ್ತುಗಳು, ಕಿಟಕಿ, ಗಾಜು ಪೀಸ್ ಪೀಸ್ ಆಗಿದೆ. ಜೆಸಿ ನಗರದ ಮುನಿರೆಡ್ಡಿ ಪಾಳ್ಯದ ನಾಥನ್ ಎಂಬುವವರ ಮನೆ ಮುಂದೆ ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದಾರೆ.
ಬೆಂಗಳೂರು (ಜು. 04): ಕೊರೊನಾ ಸೋಂಕಿತನ ಶವಸಂಸ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು ನೋಡಿ..! ಸೋಂಕಿತರ ಅಂತ್ಯಕ್ರಿಯೆಯನ್ನು ಜನ ವಸತಿ ಇರುವ ಪ್ರದೇಶಗಳಲ್ಲೇ ಮಾಡಲಾಗುತ್ತಿತ್ತು. ಪಿಪಿಇ ಕಿಟ್ಗಳನ್ನು ಅಲ್ಲಿಯೇ ಎಸೆದು ಹೋಗಿದ್ದರು. ಇದರಿಂದ ಆತಂಕಗೊಂಡ ಸ್ಥಳೀಯ ನಿವಾಸಿಯೊಬ್ಬ ಸುದ್ದಿ ತಿಳಿಸಿದ್ದಾರೆ. ಇವರ ಮನೆ ಮುಂದೆ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮನೆ ಮುಂದಿದ್ದ ವಸ್ತುಗಳು, ಕಿಟಕಿ, ಗಾಜು ಪೀಸ್ ಪೀಸ್ ಆಗಿದೆ. ಜೆಸಿ ನಗರದ ಮುನಿರೆಡ್ಡಿ ಪಾಳ್ಯದ ನಾಥನ್ ಎಂಬುವವರ ಮನೆ ಮುಂದೆ ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದಾರೆ.
Add Asianetnews Kannada as a Preferred Source

ಬೆಂಗಳೂರಿಗರೇ ಎಚ್ಚರ..ಎಚ್ಚರ... ಯುವಕರಲ್ಲೂ ಹೆಚ್ಚಾಗ್ತಿದೆ ಕೋವಿಡ್ ಅಟ್ಯಾಕ್..!
ವಸತಿ ಪ್ರದೇಶಗಳಿಂದ ದೂರದಲ್ಲಿ ಅಂತ್ಯ ಸಂಸ್ಕಾರ ಮಾಡುವಂತೆ ಸಚಿವ ಶ್ರೀರಾಮುಲು ಸೂಚನೆ ನೀಡಿದ್ದಾರೆ. ಸಚಿವರ ಸೂಚನೆಯ ನಡುವೆಯೂ ಜನವಸತಿ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಈ ಬಗ್ಗೆ ಸ್ಥಳದಿಂದಲೇ ನಮ್ಮ ಪ್ರತಿನಿಧಿ ನೀಡಿರುವ ವರದಿಯೊಂದು ಇಲ್ಲಿದೆ ನೋಡಿ..!