ಬೆಂಗಳೂರು ಗಲಭೆ; ಸಿಸಿಬಿಯಿಂದ ಮಿಡ್ನೈಟ್ ಆಪರೇಶನ್, 50 ಕ್ಕೂ ಹೆಚ್ಚು ಪುಂಡರು ವಶಕ್ಕೆ
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಡರ ಹೆಡೆಮುರಿ ಕಟ್ಟಲು ಪೊಲೀಸರು ಮಿಡ್ನೈಟ್ ಅಪರೇಶನ್ ನಡೆಸಿದ್ದಾರೆ. ಸಿಸಿಬಿ ಟೀಂ ರಾತ್ರೋರಾತ್ರಿ ಫೀಲ್ಡಿಗಿಳಿದಿದೆ.
ಬೆಂಗಳೂರು (ಆ. 14): ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಡರ ಹೆಡೆಮುರಿ ಕಟ್ಟಲು ಪೊಲೀಸರು ಮಿಡ್ನೈಟ್ ಅಪರೇಶನ್ ನಡೆಸಿದ್ದಾರೆ. ಸಿಸಿಬಿ ಟೀಂ ರಾತ್ರೋರಾತ್ರಿ ಫೀಲ್ಡಿಗಿಳಿದಿದೆ.
ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ತಡರಾತ್ರಿ ಮನೆಮನೆಗೂ ನುಗ್ಗಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಗಲಭೆಯ ದೃಶ್ಯಾವಳಿಗಳನ್ನು ಆಧರಿಸಿ 50 ಕ್ಕೂ ಹೆಚ್ಚು ಪುಂಡರನ್ನು ವಶಕ್ಕೆ ತೆಗೆದುಕೊಂಡಿದೆ. ಇದುವರೆಗೂ 200 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.