Asianet Suvarna News Asianet Suvarna News

ಕಸಾಯಿಖಾನೆ ಸೇರುತ್ತಿದ್ದ ಕರುವನ್ನು ರಕ್ಷಿಸಿದ ಮಹಮ್ಮದ್ ರಫಿ

ಕರುವಿಗೆ ಭೀಮಾ ಎಂದು ನಾಮಕರಣ ಮಾಡಲಾಗಿದ್ದು, ಕಳೆದ 18 ದಿನಗಳಿಂದ ಕರುವನ್ನು ಪೊಲೀಸರು ಆರೈಕೆ ಮಾಡುತ್ತಿದ್ದಾರೆ. ಇದೀಗ ಠಾಣೆಯಲ್ಲೇ ಭೀಮನನ್ನು ಸಾಕಲು ಪೊಲೀಸರು ನಿರ್ಧರಿಸಿದ್ದಾರೆ.

ಬೆಂಗಳೂರು(ಏ.19) ಕಸಾಯಿ ಖಾನೆಯ ಪಾಲಾಗುತ್ತಿದ್ದ ಕರುವನ್ನು ರಕ್ಷಿಸಿದ್ದಾರೆ ಬೈಯಪ್ಪನಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಮಹಮ್ಮದ್ ರಫಿ. ಅಪರಿಚಿತರು ಟಿಟಿಯೊಳಗೆ ಕವರ್‌ನಲ್ಲಿ ಸುತ್ತಿ ಕಳ್ಳ ಸಾಗಾಣಿಕೆ ಮಾಡುವ ವೇಳೆ ಕರುವನ್ನು ಬೈಯಪ್ಪನಹಳ್ಳಿ ರಕ್ಷಿಸಿದ್ದಾರೆ.

ಆ ಕರುವಿಗೆ ಭೀಮಾ ಎಂದು ನಾಮಕರಣ ಮಾಡಲಾಗಿದ್ದು, ಕಳೆದ 18 ದಿನಗಳಿಂದ ಕರುವನ್ನು ಪೊಲೀಸರು ಆರೈಕೆ ಮಾಡುತ್ತಿದ್ದಾರೆ. ಇದೀಗ ಠಾಣೆಯಲ್ಲೇ ಭೀಮನನ್ನು ಸಾಕಲು ಪೊಲೀಸರು ನಿರ್ಧರಿಸಿದ್ದಾರೆ.

ಜನರಿಗೆ ಜೀವಕ್ಕಿಂತ ಲೋಟ ಹಾಲೇ ಹೆಚ್ಚಾಯ್ತಾ? ಅರ್ಧ ಲೀಟರ್‌ ಹಾಲಿಗಾಗಿ ಕಿಲೋಮೀಟರ್‌ಗಟ್ಟಲೇ ಕ್ಯೂ..!

ಇನ್ನೂ ಈ ಹಸುವನ್ನು ಸಾಕಿ ಸಲುಹುತ್ತಿರುವ ಬೈಯಪ್ಪನಹಳ್ಳಿ ಇನ್ಸ್ ಪೆಕ್ಟರ್ ಮಹಮ್ಮದ್ ರಫಿ ಸುವರ್ಣನ್ಯೂಸ್ ಜೊತೆ ಭೀಮಾ ಒಡನಾಟದ ಬಗ್ಗೆ ತಮ್ಮ‌ ಅನುಭವ ಹಂಚಿಕೊಂಡಿದ್ದು ಹೀಗೆ..

Video Top Stories