Asianet Suvarna News Asianet Suvarna News

ಯಾವುದೇ ಲಕ್ಷಣ ಇರದಿದ್ರೂ ವಕ್ಕರಿಸುತ್ತೆ ಮಹಾಮಾರಿ ಕೊರೋನಾ..?

ಲಕ್ಷಣ ಇಲ್ಲದವರ ಟೆಸ್ಟಿಂಗ್‌ ನಿಲ್ಲಿಸಿದ ರಾಜ್ಯ ಸರ್ಕಾರ| ಲಕ್ಷಣ ಇದ್ದರೆ ಮಾತ್ರ ಕೊರೋನಾ ಪರೀಕ್ಷೆ| ದಿನವೊಂದಕ್ಕೆ 15 ಸಾವಿರ ಮಂದಿಗೆ ಕೋವಿಡ್‌ ಟೆಸ್ಟ್ ಮಾಡುವ ಸಾಮರ್ಥ್ಯವಿದ್ದರೂ ಕೂಡ ರಾಜ್ಯ ಸರ್ಕಾರ ಕೊರೋನಾ ಟೆಸ್ಟ್‌ ಮಾಡುತ್ತಿಲ್ಲ|

ಬೆಂಗಳೂರು(ಜೂ.14):  ಲಕ್ಷಣಗಳಿಲ್ಲದಿದ್ದರೂ ಕೊರೋನಾ ವೈರಸ್‌ ತಗುಲಿದ ಬಹಳಷ್ಟು ಪ್ರಕಣಗಳು ರಾಜ್ಯದಲ್ಲಿ ವರದಿಯಾಗಿವೆ. ಇಂತಹ ಕೇಸ್‌ಗಳಿಂದ ರಾಜ್ಯಕ್ಕೆ ಹೊಸ ನೋವಾಗಿ ಕಾಡುತ್ತಿದೆ. ಕೆಮ್ಮು, ಸೀನು, ಜ್ವರ ಇಲ್ಲದಿದ್ದರೂ ಮಹಾಮಾರಿ ಕೊರೋನಾ ವೈರಸ್‌ ವಕ್ಕರಿಸುತ್ತಿದೆ. 

ವಿಜಯಪುರ: ಪೊಲೀಸರಿಗೆ ಶಾಕ್‌ ಕೊಟ್ಟ ಕೊರೋನಾ ಹೆಮ್ಮಾರಿ..!

ಸದ್ಯ ಲಕ್ಷಣ ಇಲ್ಲದವರ ಟೆಸ್ಟಿಂಗ್‌ ಅನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ. ಲಕ್ಷಣ ಇದ್ದರೆ ಮಾತ್ರ ಕೊರೋನಾ ಪರೀಕ್ಷೆ ಮಾಡಲಾಗುತ್ತಿದೆ. ದಿನವೊಂದಕ್ಕೆ 15 ಸಾವಿರ ಮಂದಿಗೆ ಕೋವಿಡ್‌ ಟೆಸ್ಟ್ ಮಾಡುವ ಸಾಮರ್ಥ್ಯವಿದ್ದರೂ ಕೂಡ ರಾಜ್ಯ ಸರ್ಕಾರ ಕೊರೋನಾ ಟೆಸ್ಟ್‌ ಮಾಡುತ್ತಿಲ್ಲ.