ರಾಜ್ಯದ ಪ್ರತಿಷ್ಠಿತ ಜ್ಯೋತಿಷಿಗೆ 50 ಲಕ್ಷ ರೂ ಬ್ಲ್ಯಾಕ್ಮೇಲ್, ಏನಿದು ವಿವಾದ.?
ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ವಿರುದ್ಧ ಮಾನಹಾನಿ ಬರಹ ಪ್ರಕಟಿಸುವುದಾಗಿ ಬೆದರಿಸಿ ಕಿಡಿಗೇಡಿಗಳು 50 ಲಕ್ಷ ರೂ ಹಣ ಸುಲಿಗೆಗೆ ಮುಂದಾಗಿದ್ದಾರೆ.
ಬೆಂಗಳೂರು (ಫೆ. 03): ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ವಿರುದ್ಧ ಮಾನಹಾನಿ ಬರಹ ಪ್ರಕಟಿಸುವುದಾಗಿ ಬೆದರಿಸಿ ಕಿಡಿಗೇಡಿಗಳು 50 ಲಕ್ಷ ರೂ ಹಣ ಸುಲಿಗೆಗೆ ಮುಂದಾಗಿದ್ದಾರೆ.
ನಿಮ್ಮ ಕುಟುಂಬದ ವೈಯಕ್ತಿಕ ವಿಷಯಗಳ ಕುರಿತು ಕೆಲವು ಮಾಹಿತಿ ಸಂಗ್ರಹಿಸಿದ್ದೇವೆ. ಈ ಬಗ್ಗೆ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ. ಈ ಸುದ್ದಿ ಪ್ರಕಟಿಸಬಾರದು ಎಂದರೆ .50 ಲಕ್ಷ ಕೊಡಬೇಕು ಬ್ಲ್ಯಾಕ್ಮೇಲ್ ಮಾಡುತ್ತಿದ್ದರು. ಕೊನೆಗೆ .26 ಲಕ್ಷವಾದರೂ ಕೊಡಿ ಎಂದು ಬೆದರಿಸುತ್ತಿದ್ದರು. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆನಂದ್ ಗುರೂಜಿ ಆರೋಪಿಸಿದ್ದಾರೆ. ಈ ಬ್ಲ್ಯಾಕ್ ಮೇಲ್ ಕಹಾನಿ ಇಲ್ಲಿದೆ ನೋಡಿ..!