
ರಾಜ್ಯದಲ್ಲಿ ಭಾರತ್ ಬಂದ್ಗೆ ಬೆಂಬಲ ಬಹುತೇಕ ಅನುಮಾನ
* ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್
* ಸಂಘಟನೆಗಳಿಂದ ಕೇವಲ ನೈತಿಕ ಬೆಂಬಲ
* ಕೊರೋನಾದಿಂದ ವ್ಯಾಪಾರದ ಮೇಲೆ ಹೊಡೆತ
ಬೆಂಗಳೂರು(ಸೆ.25): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಸೋಮವಾರದ ಭಾರತ್ ಬಂದ್ಗೆ ರಾಜ್ಯದಲ್ಲಿ ಬಹುತೇಕ ಅನುಮಾನ ವ್ಯಕ್ತವಾಗಿದೆ. ಸಂಘಟನೆಗಳು ಕೇವಲ ನೈತಿಕ ಬೆಂಬಲವನ್ನ ಘೋಷಿಸಿವೆ. ಹೀಗಾಗಿ ಭಾರತ್ ಬಂದ್ಗೆ ರಾಜ್ಯದಲ್ಲಿ ಬೆಂಬಲ ಬಹುತೇಕ ಅನುಮಾನವಾಗಿದೆ. ಕೊರೋನಾದಿಂದ ವ್ಯಾಪಾರದ ಮೇಲೆ ಈಗಾಗಲೇ ಸಾಕಷ್ಟು ಹೊಡೆತ ಬಿದ್ದಿದೆ. ಮತ್ತೆ ಬಂದ್ ಮಾಡಿದರೆ ಜನಜೀವನ ಕಷ್ಟವಾಗುತ್ತದೆ. ಹೀಗಾಗಿ ಬಂದ್ಗೆ ಕೇವಲ ನೈತಿಕ ಬೆಂಬಲ ಘೋಷಿಸಲು ಸಂಘಟನೆಗಳು ನಿರ್ಧರಿಸಿವೆ. ಓಲಾ, ಉಬರ್ ಸಂಘ, ಬೀದಿ ಬದಿ ವ್ಯಾಪಾರಿಗಳೂ ಬಂದ್ಗೆ ಕೇವಲ ನೈತಿಕ ಬೆಂಬಲ ಸೂಚಿಸಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ