
ವನ್ಯಜೀವಿ ಸಂರಕ್ಷಣಾ ಅಭಿಯಾನ: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಿಷಬ್ ಶೆಟ್ಟಿ ಜಾಗೃತಿ
ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಷ್ಯಾನಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ತಂಡ ನಟ ರಿಷಬ್ ಶೆಟ್ಟಿ ಜೊತೆ ಜಾಗೃತಿ ಮೂಡಿಸಲಾಯಿತು.
ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಇದು ಕರ್ನಾಟಕದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 500 ಕಿ.ಮೀ ಪ್ರದೇಶದಲ್ಲಿ ಇದು ಹರಡಿಕೊಂಡಿದೆ. ಇಲ್ಲಿ ಹಲವಾರು ಸಸ್ಯ ವರ್ಗವಿದ್ದು, ಹಲವಾರು ಪ್ರಾಣಿಗಳು ಸಹ ಇವೆ. ಇಂತಹ ಪ್ರದೇಶದ ಬಗ್ಗೆ ಜಾಗೃತಿ ಮೂಡಿಸಲು ಏಷ್ಯಾನಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ತಂಡ, ನಟ ರಿಷಬ್ ಶೆಟ್ಟಿ(Rishabh Shetty) ಜೊತೆ ಅಲ್ಲಿಗೆ ತಲುಪಿತು. ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ(wildlife conservation campaign) ನಟ ರಿಷಬ್ ಶೆಟ್ಟಿ ಕುಟುಂಬ ಸಹ ಭಾಗಿಯಾಗಿತ್ತು.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಸಂತೋಷ್ ಕಿಡ್ನಿ ಕಸಿ ದಿನಾಂಕ ಮುಂದೂಡಿಕೆ: ಈ ಬಗ್ಗೆ ಡಾ. ರಾಜಶೇಖರ್ ಹೇಳಿದ್ದೇನು ?