Asianet Suvarna News Asianet Suvarna News

ACB Raid: ಶಿವಮೊಗ್ಗ ಕೃಷಿ ಇಲಾಖೆ ಅಧಿಕಾರಿ ಮನೆಯಲ್ಲ, ಚಿನ್ನದ ಖಜಾನೆ, ಅಧಿಕಾರಿಗಳು ತಬ್ಬಿಬ್ಬು!

ಎಸಿಬಿ ಅಧಿಕಾರಿಗಳು (ACB Raid) ದಾಳಿ ನಡೆಸಿದಾಗ ಕೃಷಿ ಇಲಾಖೆ (Agriculture Officer) ಅಧಿಕಾರಿ ಮನೆಯಲ್ಲಿ ಚಿನ್ನದ ಖಜಾನೆಯೇ ಸಿಕ್ಕಿದೆ. ಶಿವಮೊಗ್ಗದ (Shivamogga) ರುದ್ರೇಶಪ್ಪ ಮನೆಯಲ್ಲಿ ಚಿನ್ನ, ವಜ್ರ, ಪ್ಲಾಟಿನಂ ಆಭರಣಗಳು ಸಿಕ್ಕಿವೆ.

ಬೆಂಗಳೂರು (ನ. 24): ಎಸಿಬಿ ಅಧಿಕಾರಿಗಳು ದಾಳಿ (ACB Raid) ನಡೆಸಿದಾಗ ಕೃಷಿ ಇಲಾಖೆ ಅಧಿಕಾರಿ ಮನೆಯಲ್ಲಿ ಚಿನ್ನದ ಖಜಾನೆಯೇ ಸಿಕ್ಕಿದೆ.

ACB Raid: ಕಲಬುರಗಿ PWD ಅಧಿಕಾರಿ ಮನೆಯ ಪೈಪ್‌ನಲ್ಲಿ ನೀರಲ್ಲ, ಕಂತೆ ಕಂತೆ ಹಣ.!

ಶಿವಮೊಗ್ಗದ ರುದ್ರೇಶಪ್ಪ ಮನೆಯಲ್ಲಿ ಚಿನ್ನ, ವಜ್ರ, ಪ್ಲಾಟಿನಂ ಆಭರಣಗಳು ಸಿಕ್ಕಿವೆ. 53 ಚಿನ್ನದ ಬಿಸ್ಕತ್, 25 ಚಿನ್ನದ ಸರ, 4 ಮಾಂಗಲ್ಯ ಸರ, 1 ಕಾಸಿನ ಸರ, 9 ಜೊತೆ ಓಲೆಗಳು, 14 ಚಿನ್ನದ ನಾಣ್ಯಗಳು, 26 ಉಂಗುರಗಳು, ಸೇರಿ 3.5 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಇಷ್ಟೇ ಅಲ್ಲ 15 ಲಕ್ಷ ರೂ ಮೌಲ್ಯದ ನಗದು ಪತ್ತೆಯಾಗಿದೆ. 

 

Video Top Stories