ಬೆಂಗಳೂರು ಗಲಭೆಗೆ ನವೀನ್ ಪೋಸ್ಟ್ ನೆಪಮಾತ್ರ; ಹಿಂದೆ ಇತ್ತು ದೊಡ್ಡ ಸ್ಕೆಚ್..!

ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ನವೀನ್ ಹಾಕಿದ್ದ ಎನ್ನಲಾದ ಅವಹೇಳನಕಾರಿ ಪೋಸ್ಟ್ ಬರೀ ನೆಪ ಮಾತ್ರಕ್ಕಷ್ಟೇ. ಈ ಗಲಭೆ ಹಿಂದೆ ದೊಡ್ಡದೊಂದು ಸ್ಕೆಚ್ ಇತ್ತು ಎನ್ನುವುದನ್ನು ಗಲಭೆಕೋರರು ಬಾಯ್ಬಿಟ್ಟಿದ್ದು ಇದನ್ನು ಕೇಳಿ ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ಅತ್ತ ಅಯೋಧ್ಯೆಯಲ್ಲಿ ಭೂಮಿಪೂಜೆಗೆ ಮುಹೂರ್ತ ಸಮೀಪಿಸುತ್ತಿದ್ದಂತೆ ಇತ್ತ ಗಲಭೆಗೆ ಮುಹೂರ್ತ ಇಟ್ಟಿದ್ದರು ಗಲಭೆಕೋರರು. ಆಗಸ್ಟ್ 4 ರಿಂದ 11 ರವರೆಗೆ ಸಂಚು ನಡೆದಿತ್ತು. ಸ್ಥಳೀಯ ನಾಯಕರ ಜೊತೆ ಸೇರಿ ಮುಜಾಮಿಲ್ ಸಂಚು ನಡೆಸಿದ್ದ ಎಂಬ ಅಂಶ ಬಯಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 16): ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ನವೀನ್ ಹಾಕಿದ್ದ ಎನ್ನಲಾದ ಅವಹೇಳನಕಾರಿ ಪೋಸ್ಟ್ ಬರೀ ನೆಪ ಮಾತ್ರಕ್ಕಷ್ಟೇ. ಈ ಗಲಭೆ ಹಿಂದೆ ದೊಡ್ಡದೊಂದು ಸ್ಕೆಚ್ ಇತ್ತು ಎನ್ನುವುದನ್ನು ಗಲಭೆಕೋರರು ಬಾಯ್ಬಿಟ್ಟಿದ್ದು ಇದನ್ನು ಕೇಳಿ ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ಅತ್ತ ಅಯೋಧ್ಯೆಯಲ್ಲಿ ಭೂಮಿಪೂಜೆಗೆ ಮುಹೂರ್ತ ಸಮೀಪಿಸುತ್ತಿದ್ದಂತೆ ಇತ್ತ ಗಲಭೆಗೆ ಮುಹೂರ್ತ ಇಟ್ಟಿದ್ದರು ಗಲಭೆಕೋರರು. ಆಗಸ್ಟ್ 4 ರಿಂದ 11 ರವರೆಗೆ ಸಂಚು ನಡೆದಿತ್ತು.

ಸ್ಥಳೀಯ ನಾಯಕರ ಜೊತೆ ಸೇರಿ ಮುಜಾಮಿಲ್ ಸಂಚು ನಡೆಸಿದ್ದ ಎಂಬ ಅಂಶ ಬಯಲಾಗಿದೆ. ಪೊಲೀಸ್ ಜೀಪ್‌ಗೆ ಬೆಂಕಿಯಿಟ್ಟ ರಿಯಾಜ್‌ಗೆ ಪೊಲೀಸರು ಬೆಂಡೆತ್ತಿದ್ದಾರೆ. ಗಲಭೆ ಕೇಸ್‌ನಲ್ಲಿ 340 ಕ್ಕೂ ಹೆಚ್ಚು ಜನರನ್ನು ಅರೆಸ್ಟ್ ಮಾಡಲಾಗಿದೆ. ಇದುವರೆಗೂ 45 ಎಫ್‌ಐಆರ್ ದಾಖಲಾಗಿದೆ. ಬಂಧಿತರ ಸಂಖ್ಯೆ ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರು ಗಲಭೆ: SDPI ಕಚೇರಿಯಲ್ಲಿ ಅಡಗಿ ಕುಳಿತಿದ್ದ ಪುಂಡರು ಅರೆಸ್ಟ್..!

Related Video