ಕಮರ್ಷಿಯಲ್ ಉದ್ದೇಶಕ್ಕೆ ಕಟ್ಟಡ ಪಡೆದು ಕಚೇರಿ ತೆರೆದ ಆಪ್; ಮಾಲೀಕರಿಂದ ಆಕ್ಷೇಪ
ಮಹದೇವಪುರಲ್ಲಿ ವಾಣಿಜ್ಯ ಬಳಕೆಗೆ ಕಟ್ಟಡ ಪಡೆದು ಪಕ್ಷದ ಕಚೇರಿ ತೆರೆದ ಆಮ್ ಆದ್ಮಿ ಪಕ್ಷದ ವಿರುದ್ಧ ಕಟ್ಟಡ ಮಾಲಿಕ ಚಂದ್ರಪ್ಪ ಹಾಗೂ ಶ್ರೀಕಾಂತ್ ಆರೋಪಿಸಿದ್ದಾರೆ.
ಬೆಂಗಳೂರು (ಆ. 18): ಮಹದೇವಪುರಲ್ಲಿ ವಾಣಿಜ್ಯ ಬಳಕೆಗೆ ಕಟ್ಟಡ ಪಡೆದು ಪಕ್ಷದ ಕಚೇರಿ ತೆರೆದ ಆಮ್ ಆದ್ಮಿ ಪಕ್ಷದ ವಿರುದ್ಧ ಕಟ್ಟಡ ಮಾಲಿಕ ಚಂದ್ರಪ್ಪ ಹಾಗೂ ಶ್ರೀಕಾಂತ್ ಆರೋಪಿಸಿದ್ದಾರೆ.
ಅಫ್ಘಾನ್ ಮುಸ್ಲೀಮರನ್ನು ಭಾರತಕ್ಕೆ ಕರೆಸಿಕೊಳ್ಳಿ; ದೇಶದಲ್ಲಿ ಶುರುವಾಯ್ತು ಅಭಿಯಾನ!
'ರಾಜಕೀಯ ಉದ್ದೇಶಗಳಿಗೆ ನಾವು ಕಟ್ಟಡವನ್ನು ನೀಡುತ್ತಿರಲಿಲ್ಲ. ನಮ್ಮ ಅಗ್ರಿಮೆಂಟಲ್ಲಿ ಕಮರ್ಷಿಯಲ್ ಉದ್ದೇಶಗಳಿಗೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಆದರೂ ಅವರು ಕಚೆರಿ ತೆರೆದು ದೊಡ್ಡದಾಗಿ ಕಾರ್ಯಕ್ರಮ ನಡೆಸಿದ್ದಾರೆ. ಇದಕ್ಕೆ ನಾವು ಒಪ್ಪಲಿಲ್ಲ. ಕಾನೂನು ಹೋರಾಟ ಮಾಡುತ್ತೇವೆ. ನೀವು ಕಚೇರಿ ಖಾಲಿ ಮಾಡಿ' ಎಂದು ಆಪ್ನವರಿಗೆ ಹೇಳಿದ್ದೇವೆಂದು ಕಟ್ಟಡದ ಮಾಲಿಕ ಶ್ರೀಕಾಂತ್ ಹೇಳಿದ್ದಾರೆ.