Asianet Suvarna News Asianet Suvarna News

ಮಹಾಮಾರಿ ಗಂಡಾಂತರ: ಆಶಾ ಕಾರ್ಯಕರ್ತೆಯ ಕುಟುಂಬದ 16 ಮಂದಿಗೆ ಕೊರೋನಾ

ಪೊಲೀಸರ ಬಳಿಕ ಇದೀಗ ಆಶಾ ಕಾರ್ಯಕರ್ತೆಯರಿಗೂ ಕೋವಿಡ್‌ ಕಂಟಕ| ಕಾರ್ಯಕರ್ತೆಯ ಇಡೀ ಕುಟುಂಬಕ್ಕೆ ಕೊರೋನಾ ವೈರಸ್‌| ಬೆಂಗಳೂರಿನ ಸೀಗೆಹಳ್ಳಿಯ ಆಶಾ ಕಾರ್ಯಕರ್ತೆಗೆ ಕಳೆದ ತಿಂಗಳು 29 ರಂದು ಕೊರೋನಾ ಸೋಂಕು ದೃಢ| 

ಬೆಂಗಳೂರು(ಜು.06): ಕೊರೋನಾ ವಾರಿಯರ್ಸ್‌ಗೆ ಮಹಾಮಾರಿ ಕೊರೋನಾ ವೈರಸ್‌ ಗಂಡಾಂತರ ತಂದೊಡ್ಡಿದೆ. ಪೊಲೀಸರ ಬಳಿಕ ಇದೀಗ ಆಶಾ ಕಾರ್ಯಕರ್ತೆಯರಿಗೂ ಕೋವಿಡ್‌ ಕಂಟಕವಾಗುತ್ತಿದೆ. ಆಶಾ ಕಾರ್ಯಕರ್ತೆಯ ಇಡೀ ಕುಟುಂಬಕ್ಕೆ ಕೊರೋನಾ ವೈರಸ್‌ ತಗುಲಿರುವುದು ದೃಢಪಟ್ಟಿದೆ. 

ಬೆಂಗಳೂರು ಪೊಲೀಸರ ಬೆನ್ನತ್ತಿದ ಕೊರೋನಾ ಭೂತ..!

ಒಂದೇ ಕುಟುಂಬದ 16 ಮಂದಿಗೆ ಸೋಂಕು ಅಂಟಿದೆ. ಬೆಂಗಳೂರಿನ ಸೀಗೆಹಳ್ಳಿಯ ಆಶಾ ಕಾರ್ಯಕರ್ತೆಗೆ ಕಳೆದ ತಿಂಗಳು 29 ರಂದು ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೀಗ ಸೋಂಕಿತ ಕುಟುಂಬದ 15 ಮಂದಿಗೆ ಕೋವಿಡ್‌ ದೃಢಪಟ್ಟಿದೆ. 
 

Video Top Stories