Asianet Suvarna News Asianet Suvarna News

‘ಕಾಂತಾರ 2’ ಸಿನಿಮಾಗೆ ಬೇಕು ವೀರೇಂದ್ರ ಹೆಗ್ಗಡೆ ಅನುಮತಿ: ಈ ಕುರಿತು ದೈವ ಹೇಳಿದ್ದೇನು?

ಕಾಂತಾರ -2 ಸಿನಿಮಾ ಮಾಡಲು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅನುಮತಿಯಿದ್ರೆ ಮಾತ್ರ ಸಾಧ್ಯ ಅನ್ನೋ ಸುದ್ದಿ ಕರಾವಳಿ ಕಡಲ ತೀರದಿಂದ ಬಂದಿದೆ. 
 

ರಿಷಬ್ ಶೆಟ್ಟಿ ಕುಟುಂಬ ಕಾಂತಾರ-2 ಸಿನಿಮಾ ಮಾಡೋಕೆ ದೈವದ ಬಳಿ ಕೇಳಿದ್ರು. ಅಣ್ಣಪ್ಪ ದೈವ ನೀವು 100 ಪಟ್ಟು ಯೋಚನೆ ಮಾಡಿ ಕಾಂತಾರ-2 ಮಾಡಿ ಅಂತ ನುಡಿ ಕೊಟ್ಟಿತ್ತಂತೆ. ಅಷ್ಟೆ ಅಲ್ಲ ಇದರ ಮುಂದುವರೆದ ಭಾಗವಾಗಿ ಈಗ ಕಾಂತಾರ-2 ಮಾಡಲು ಧರ್ಮಸ್ಥಳದ ಶ್ರೀಮಂಜುನಾಥನ ಬಳಿ ಬೇಡಿಕೊಳ್ಳಬೇಕು. ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಅನುಮತಿ ಪಡೆದಿರಬೇಕು ದೈವ ಹೇಳಿದೆಯಂತೆ. 

'ರಿಷಬ್ ಶೆಟ್ಟಿ ಮೇಲೆ ನನಗೆ ಹೊಟ್ಟೆಕಿಚ್ಚು' ಎಂದ ನವಾಝುದ್ದೀನ್ ಸಿದ್ದಿಕಿ; ಕಾಂತಾರ ಶಿವನ ರಿಯಾಕ್ಷನ್ ವೈರಲ್


 

Video Top Stories