
ಹೆಣ್ಣು ಕಾಳಿ ಅವತಾರ ಎತ್ತಿದ್ರೆ ಶಿವನನ್ನೂ ಎದುರಿಸಬಹುದು: ನಟಿ ಮಾಲಾಶ್ರೀ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗಳನ್ನು ಭೇಟಿ ಆಗಿ ತುಂಬಾ ಸಂತೋಷ ಆಯ್ತು ಎಂದು ನಟಿ ಮಾಲಾಶ್ರೀ ಹೇಳಿದರು.
ನೀರ ಆರ್ಯ ಸಿನಿಮಾದ ಟೀಸರ್ ನೋಡಿದೆ. ದೇಶಕ್ಕಾಗಿ ನೀರಾ ಆರ್ಯ ಎಷ್ಟು ಕಷ್ಟ ಪಟ್ಟಿದ್ದಾರೆ ಅಂತ ಗೊತ್ತು ಎಂದು ನಟಿ ಮಾಲಾಶ್ರೀ ಹೇಳಿದರು. ಒಂದು ಹೆಣ್ಣು ಕಾಳಿ ಅವತಾರ ಎತ್ತಿದ್ರೆ ಶಿವನನ್ನೂ ಎದುರಿಸಬಹುದು. ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಅಲ್ಲ, ಒಳಗೆ ಸೇರದೇ ಇದ್ರು ಹುಡುಗಿ ಗಂಡು ಆಗಬೇಕು ಎಂದರು. ಎಲ್ಲರೂ ನ್ಯಾಯಕ್ಕೋಸ್ಕರ ಹೋರಾಡಬೇಕು, ಪ್ರತಿಯೊಬ್ಬರು ಧೈರ್ಯವಾಗಿ ಎದುರಿಸಬೇಕು ಎಂದರು. ರೂಪ ಅಯ್ಯರ್ ತುಂಬಾ ಚೆನ್ನಾಗಿ ನೀರ ಆರ್ಯ ಸಿನಿಮಾ ಮಾಡಿದ್ದಾರೆ, ಸುಭಾಷ್ ಚಂದ್ರಬೋಸ್ ಅವರ ಮಹಿಳಾ ಆರ್ಮಿ ಕಥೆ ಇದು ಎಂದರು. ಇಂತಹ ಕಥೆಯ ಸಿನಿಮಾ ಮಾಡೋಕೆ ಧೈರ್ಯ ಬೇಕು ಎಂದರು.
Add Asianetnews Kannada as a Preferred Source

ನೇತಾಜಿಯನ್ನು ಯುವ ಜನಾಂಗ ನೇಪತ್ಯಕ್ಕೆ ತಳ್ಳಿದ್ದಾರೆ ಅನ್ನಿಸುತ್ತೆ: ಐಪ ...