Asianet Suvarna News Asianet Suvarna News

ಆತ್ಮಹತ್ಯೆಗೆ ಮುಂದಾದ ಜಯಶ್ರೀ ರಾಮಯ್ಯಗೆ ಕಿಚ್ಚ ಸುದೀಪ್ ಸ್ಫೂರ್ತಿಯ ಮಾತು

ಬದುಕಿನಲ್ಲಿನ ನಡೆದ ಹಲವು ಘಟನೆಗಳಿಂದ ಬೇಸತ್ತ ನಟಿ ಜಯಶ್ರಿ ರಾಮಯ್ಯ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ನಟಿ ಜಯಶ್ರಿ ನೆರವಿಗೆ ಚಿತ್ರರಂಗ ಗಣ್ಯರು, ಅಭಿಮಾನಿಗಳು ನಿಂತಿದ್ದಾರೆ. ಇದೀಗ ಕಿಚ್ಚ ಸುದೀಪ್, ಜಯಶ್ರಿಗೆ ಹೊಸ ಬದುಕಿಗೆ ದಾರಿ ತೋರಿಸಿದ್ದಾರೆ.   ಸುವರ್ಣನ್ಯೂಸ್ ಜೊತೆ ಮಾತನಾಡಿದ ನಟಿ ಜಯಶ್ರಿಗೆ, ನಟ ಕಿಚ್ಚ ಸುದೀಪ್ ಸ್ಪೂರ್ತಿದಾಯಕ ಮಾತುಗಳನ್ನಾಡಿ ಆತ್ಮಸ್ಥೈರ್ಯ ತುಂಬಿದ್ದಾರೆ.

ಬೆಂಗಳೂರು(ಜು.25): ಬದುಕಿನಲ್ಲಿನ ನಡೆದ ಹಲವು ಘಟನೆಗಳಿಂದ ಬೇಸತ್ತ ನಟಿ ಜಯಶ್ರಿ ರಾಮಯ್ಯ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ನಟಿ ಜಯಶ್ರಿ ನೆರವಿಗೆ ಚಿತ್ರರಂಗ ಗಣ್ಯರು, ಅಭಿಮಾನಿಗಳು ನಿಂತಿದ್ದಾರೆ. ಇದೀಗ ಕಿಚ್ಚ ಸುದೀಪ್, ಜಯಶ್ರಿಗೆ ಹೊಸ ಬದುಕಿಗೆ ದಾರಿ ತೋರಿಸಿದ್ದಾರೆ.   ಸುವರ್ಣನ್ಯೂಸ್ ಜೊತೆ ಮಾತನಾಡಿದ ನಟಿ ಜಯಶ್ರಿಗೆ, ನಟ ಕಿಚ್ಚ ಸುದೀಪ್ ಸ್ಪೂರ್ತಿದಾಯಕ ಮಾತುಗಳನ್ನಾಡಿ ಆತ್ಮಸ್ಥೈರ್ಯ ತುಂಬಿದ್ದಾರೆ.

'ಬದುಕಲು ಇಷ್ಟವಿಲ್ಲ ನಾನು ಸಾಯಬೇಕು' ಲೈವ್ ವಿಡಿಯೋ ಮಾಡಿ ಕಟ್ ಮಾಡಿದ ಜಯಶ್ರೀ!.

ಆಸ್ತಿ ವಿವಾದ ಸೇರಿದಂತೆ ಹಲವು ಘಟನೆಗಳಿಂದ ನೊಂದಿದ್ದ ಜಯಶ್ರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳಿವು ನೀಡಿದ್ದರು. ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು.