'ಮೈ ಆಟೋಗ್ರಾಫ್ ಸೋತಿದ್ರೆ ಮನೆ ಬಿಟ್ಟು ಹೋಗಬೇಕಿತ್ತು. ಸೂಟ್‌ಕೇಸ್ ರೆಡಿ ಮಾಡಿಟ್ಟಿದ್ದೆ'

ಜನವರಿ 31 ರಂದು ದುಬೈನ ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಟೀಸರ್ ರಿಲೀಸ್ ಮಾಡಲು ಇಡೀ ಚಿತ್ರತಂಡ ದುಬೈಗೆ ಹಾರಿದೆ. ಜೊತೆಗೆ ಸುದೀಪ್ ಸಿನಿಮಾ ಜೀವನಕ್ಕೆ 25 ವರ್ಷದ ಸಂಭ್ರಮ.

Share this Video
  • FB
  • Linkdin
  • Whatsapp

ಬೆಂಗಳೂರು (ಜ. 30): ಜನವರಿ 31 ರಂದು ದುಬೈನ ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಟೀಸರ್ ರಿಲೀಸ್ ಮಾಡಲು ಇಡೀ ಚಿತ್ರತಂಡ ದುಬೈಗೆ ಹಾರಿದೆ. ಜೊತೆಗೆ ಸುದೀಪ್ ಸಿನಿಮಾ ಜೀವನಕ್ಕೆ 25 ವರ್ಷದ ಸಂಭ್ರಮ. ಆ ಸಂಭ್ರಮವನ್ನು ವಿಕ್ರಾಂತ್ ಸಿನಿಮಾ ತಂಡ, ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಜೊತೆ ಸೆಲಬ್ರೆಟ್ ಮಾಡಲಿದ್ದಾರೆ.

Add Asianetnews Kannada as a Preferred SourcegooglePreferred

ದುಬೈ ವಿಮಾನ ನಿಲ್ದಾಣದಲ್ಲೇ ಸುದೀಪ್‌ಗೆ ಸಿಕ್ತು ಅದ್ಧೂರಿ ಸ್ವಾಗತ, ದುಬಾರಿ ಗಿಫ್ಟ್!

ಈ ಸಂದರ್ಭದಲ್ಲಿ 25 ವರ್ಷದ ಸಿನಿ ಪಯಣದ ಬಗ್ಗೆ ಸುದೀಪ್ ಮಾದ್ಯಮದೊಂದಿಗೆ ಮಾತುಕಥೆ ನಡೆಸಿದ್ದಾರೆ. ಮೊದಲ ಸಿನಿಮಾ ಹೌಸ್ ಫುಲ್ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಆ ನಂತರ 'ಆಟೋಗ್ರಾಫ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಆಟೋಗ್ರಾಫ್‌ಗಾಗಿ ಮನೆ ಪತ್ರ ಗಿರವಿ ಇಟ್ಟಿದ್ದೆ. ಸುದೀಪ್ ಸಿನಿಮಾ ಸೋತಿದ್ರೆ ಮನೆ ಬಿಟ್ಟು ಹೋಗಬೇಕಿತ್ತು . ಅದಕ್ಕಾಗಿ ಪತ್ನಿ ಪ್ರಿಯಾಗೆ ಸೂಟ್ ಕೇಸ್ ರೆಡಿ ಮಾಡಿರು ಎಂದಿದ್ದೆ' ಎಂದು ಸಿನಿ ಪಯಣವನ್ನು ಹೇಳುತ್ತಾ ಹೋಗುತ್ತಾರೆ. 

Related Video