
ಅಭಿಮಾನ್ ಸ್ಟುಡಿಯೋದಲ್ಲಿ ಡಾ ವಿಷ್ಣುವರ್ಧನ್ ಜನ್ಮದಿನ ಆಚರಿಸುವಂತಿಲ್ಲ-ಹೈಕೋರ್ಟ್ ತೀರ್ಪು
ನಾಳೆ ಸಾಹಸಸಿಂಹ ಡಾ.ವಿಷ್ಣುವರ್ಧನ್ 75ನೇ ಹುಟ್ಟುಹಬ್ಬ. ಈ ಸಾರಿ ವಿಷ್ಣುದಾದಾಗೆ ಕರ್ನಾಟಕ ರತ್ನ ಪ್ರಶಸ್ತಿ ಬಂದಿರೋದು ಹುಟ್ಟುಹಬ್ಬದ ಸೆಲೆಬ್ರೇಷನ್ಗೆ ಕಳೆ ತಂದಿದೆ. ಆದ್ರೆ ಅಭಿಮಾನ್ ಸ್ಟುಡಿಯೋದ ಪುಣ್ಯ ಭೂಮಿಯಲ್ಲಿ ಹುಟ್ಟುಹಬ್ಬ ಆಚರಿಸೋದಕ್ಕೆ ಅಭಿಮಾನಿಗಳಿಗೆ ಅನುಮತಿ ಸಿಕ್ಕಿಲ್ಲ.
ನಾಳೆ ಸಾಹಸಸಿಂಹ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ 75ನೇ ಹುಟ್ಟುಹಬ್ಬ. ಇತ್ತೀಚಿಗೆ ಸರ್ಕಾರ ವಿಷ್ಣುವರ್ಧನ್ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರೋದ್ರಿಂದ ಅಭಿಮಾನಿಗಳ ಖುಷಿ ಡಬಲ್ ಆಗಿದೆ. ಆದ್ರೆ ಇದೇ ಖುಷಿಯಲ್ಲಿ ಅಭಿಮಾನ್ ಸ್ಟುಡಿಯೋದ ಪುಣ್ಯಭೂಮಿಯಲ್ಲಿ ಸೆಲೆಬ್ರೇಟ್ ಮಾಡೋಣ ಅಂದ್ರೆ ಅದಕ್ಕೆ ಅವಕಾಶವಿಲ್ಲದಂತೆ ಆಗಿದೆ.