ಜೈಲಿನಲ್ಲೇ ಕೂತು 'ನವಗ್ರಹ'ಕ್ಕೆ ದರ್ಶನ್ ಸ್ಕೆಚ್; ಈ ಸಿನಿಮಾ ಹಿಂದಿದೆ ರೋಚಕ ಕಹಾನಿ!

2008ರಲ್ಲಿ ನವಗ್ರಹ ಸಿನಿಮಾ ಬಂದಿತ್ತು. ಆ ಟೈಂನಲ್ಲಿ ಸ್ಯಾಂಡಲ್​ವುಡ್​ ತುಂಬಾ ನೆಪೊಟಿಸಂ ಬೆಂಕಿ ಹೊತ್ತಿತ್ತು. ಕನ್ನಡದಲ್ಲಿ ಹೀರೋಗಳು ಮಕ್ಕಳೇ ಹೀರೋಗಳಾಗುತ್ತಾ ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾರೆ ಅಂತ ದೊಡ್ಡ ಟಾಕ್ ಆಗುತ್ತಿತ್ತು. ..

First Published Oct 26, 2024, 2:06 PM IST | Last Updated Oct 26, 2024, 2:11 PM IST

ಸ್ಟಾರ್​ ಮಕ್ಕಳ ವಿರುದ್ಧ ವಿಲನ್​ ಮಕ್ಕಳನ್ನ ಎತ್ತಿಕಟ್ಟಿದ್ದ ದರ್ಶನ್; ನವಗ್ರಹ ಸಿನಿಮಾದಲ್ಲಿ ವಿಲನ್​ ಮಕ್ಕಳೇ ಹೀರೋಗಳು:..!

2008ರಲ್ಲಿ ನವಗ್ರಹ ಸಿನಿಮಾ ಬಂದಿತ್ತು. ಆ ಟೈಂನಲ್ಲಿ ಸ್ಯಾಂಡಲ್​ವುಡ್​ ತುಂಬಾ ನೆಪೊಟಿಸಂ ಬೆಂಕಿ ಹೊತ್ತಿತ್ತು. ಕನ್ನಡದಲ್ಲಿ ಹೀರೋಗಳು ಮಕ್ಕಳೇ ಹೀರೋಗಳಾಗುತ್ತಾ ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾರೆ ಅಂತ ದೊಡ್ಡ ಟಾಕ್ ಆಗುತ್ತಿತ್ತು. ಕನ್ನಡದಲ್ಲಿ ದೊಡ್ಡ ದೊಡ್ಡ ವಿಲನ್​ಗಳಿದ್ರೂ ಅವರ ಮಕ್ಕಳಿಗೆ ಹೀರೋ ಪಟ್ಟ ಕಟ್ಟೋಕೆ ಯಾವ ನಿರ್ದೇಶಕನೂ ಮನಸ್ಸು ಮಾಡುತ್ತಿಲ್ಲ ಅಂತ ಗಾಂಧಿನಗರ ಪಡಸಾಲೆಯಲ್ಲಿ ಭಾರಿ ಚರ್ಚೆ ಆಗುತ್ತಿತ್ತು. ಆಗ ಆ ಹೀರೋಗಳ ಮಕ್ಕಳ ವಿರುದ್ಧ ವಿಲನ್ಸ್​ ಮಕ್ಕಳನ್ನ ಹೀರೋಗಳಾಗಿ ನಿಲ್ಲಿಸಿದ್ದೇ ನಟ ದರ್ಶನ್. ಹೀಗಾಗೆ ನವಗ್ರಹದಲ್ಲಿ ಕನ್ನಡದ ಟಾಪ್ ಮೋಸ್ಟ್ ವಿಲನ್ಸ್​ ಮಕ್ಕಳು ಹೀರೋಗಳಾಗಿ ಬಂದಿದ್ರು.. 
 
ಕನ್ನಡದ ಟಾಪ್ ಮೋಸ್ಟ್ ವಿಲನ್​ಗಳಾದ ಸುಧೀರ್​ ಮಗ ತರುಣ್​ ಸುಧೀರ್, ಕೀರ್ತಿರಾಜ್ ಮಗ ಧರ್ಮಕೀರ್ತಿ ರಾಜ್, ಪ್ರಭಾಕರ್ ಮಗ ವಿನೋದ್ ಪ್ರಭಾಕರ್​, ಲೋಕೇಶ್ ಮಗ ಸೃಜನ್ ಲೋಕೇಶ್, ತೂಗುದೀಪ್​ ಶ್ರೀನಿವಾಸ್ ಮಗ ದರ್ಶನ್, ದಿನೇಶ್​​​ ಮಗ ಗಿರಿ ದಿನೇಶ್,  ಸುಂದರ್​ ಕೃಷ್ಣ ಅರಸ್ ಮಗ ನಾಗೇಂದ್ರ ಅರಸ್​ ನವಗ್ರಹದಲ್ಲಿ ಹೀರೋಗಳಾಗಿ ಮಿಂಚಿದ್ರು.. ಆದರೆ, ನವಗ್ರಹ ಬಳಿಕ ಚಿತ್ರರಂಗದಲ್ಲಿ ಸಪರೇಟ್ ಆಗಿದ್ದರು ದರ್ಶನ್!.. ಯಾಕೆ ಹೀಗಾಯ್ತು, ಕಹಾನಿ ಇದೆ ವಿಡಿಯೋದಲ್ಲಿ, ನೋಡಿ.. 

 

Video Top Stories