
ಚಿರು ಬಗ್ಗೆ ಗಾಯಕ ವಿಜಯ್ ಪ್ರಕಾಶ್ ಮಾತುಗಳಿವು
ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ.
ಬೆಂಗಳೂರು (ಜೂ. 08): ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆಟ ಮುಗಿಸಿದ 'ಆಟಗಾರ' : ಚಿರು ಸಿನಿ ಜರ್ನಿ ಝಲಕ್ ಇಲ್ಲಿದೆ
ಚಿರು ಒಡನಾಟದ ಬಗ್ಗೆ ಗಾಯಕ ವಿಜಯ್ ಪ್ರಕಾಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ' ಕನ್ನಡ ಚಿತ್ರರಂಗಕ್ಕೆ ಇದು ತುಂಬಲಾರದ ನಷ್ಟ. ಒಬ್ಬ ಕಲಾವಿದನಾಗಿ ಅವನು ಅದೆಷ್ಟು ಕನಸುಗಳನ್ನು ಕಂಡಿದ್ದನೋ ಏನೋ.... ಹೀಗಾಗಬಾರದಿತ್ತು. ಅವನ ಕೆಲವು ಸಿನಿಮಾಗಳಿಗೆ ಹಾಡಿರುವ ನೆನಪು ನನ್ನದು' ಎಂದರು.