ಅರ್ಬಾಜ್ ಭಾಯ್ ತುಂಬಾ ಸಲಹೆ ನೀಡಿದ್ದಾರೆ; ನಟ ಝೈದ್ ಖಾನ್

ಬನಾರಸ್ ಹೀರೋ ಝೈದ್ ಖಾನ್, ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್ ಬಗ್ಗೆ ಮಾತನಾಡಿ ತುಂಬಾ ಸಲಹೆ ನೀಡಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್‌ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಬನಾರಸ್ ಸಿನಿಮಾ ಕೂಡ ಒಂದು. ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಇತ್ತೀಚಿಗಷ್ಟೆ ಬನಾಸರ್ ತಂಡ ಟ್ರೈಲರ್ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಅದ್ದೂರಿಯಾಗಿ ನಡೆದ ಈವೆಂಟ್ ನಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ರವಿಚಂದ್ರನ್ ಮತ್ತು ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್ ಭಾಗಿಯಾಗಿದ್ದರು. ಈವೆಂಟ್ ನಲ್ಲಿ ಮಾತನಾಡಿದ ಝೈದ್ ಖಾನ್, ವಿ ಮಿಸ್ ಯೂ ಅಪ್ಪು ಸರ್, ನೀವು ಸದಾ ನಮ್ಮ ಹೃದಯದಲ್ಲಿರ್ತೀರಾ ಎಂದು ಅಪ್ಪು ನೆನೆಯುತ್ತಾ ಮಾತು ಶುರು ಮಾಡಿದರು.ಬಳಿಕ ರವಿಚಂದ್ರನ್ ಅವರಿಗೆ ಧನ್ಯವಾದ ತಿಳಿಸಿ, ಬಾಲಿವುಡ್ ನಿಂದ ಬಂದಿದ್ದ ಅರ್ಬಾಜ್ ಖಾನ್ ಬಗ್ಗೆ ಮಾತನಾಡಿದ್ರು. ಅರ್ಬಾಜ್ ಭಾಯ್ ತುಂಬಾ ಸಲಹೆ ನೀಡಿದ್ದಾರೆ ಎಂದು ಹೇಳಿದರು. 

Add Asianetnews Kannada as a Preferred SourcegooglePreferred

Related Video