ಎಲೆಕ್ಷನ್ ಹೊತ್ತಲ್ಲಿ ಏನು ಮಾಡಿದರೆ ಅಪರಾಧ? ಏನು ಹೇಳುತ್ತೆ ನೀತಿ ಸಂಹಿತೆಯ ಕಾನೂನು?
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ರಣಘೋಷ ಮೊಳಗಿದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಈಗ ರಾಜಕಾರಣಿಗಳು ಏನೇ ಮಾಡಿದ್ರೂ, ಅದು ಸರಿನಾ ತಪ್ಪಾ ಅನ್ನೋ ದೃಷ್ಟಿಕೋನದಿಂದಲೇ ನೋಡ್ಬೇಕಾಗತ್ತೆ.. ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ರಣಘೋಷ ಮೊಳಗಿದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಈಗ ರಾಜಕಾರಣಿಗಳು ಏನೇ ಮಾಡಿದ್ರೂ, ಅದು ಸರಿನಾ ತಪ್ಪಾ ಅನ್ನೋ ದೃಷ್ಟಿಕೋನದಿಂದಲೇ ನೋಡ್ಬೇಕಾಗತ್ತೆ.. ಈ ನೀತಿ ಸಂಹಿತೆ ಜಾರಿಯಾದರೆ ಏನೇನು ಮಾಡುವಂತಿಲ್ಲ..? ಏನು ಮಾಡಿದರೆ ಅಪರಾಧ..? ಎಲೆಕ್ಷನ್ ಮುಗಿಯೋ ತನಕ ಹೇಗಿರಲಿದೆ ಸರ್ಕಾರ..? ಏನು ಹೇಳುತ್ತೆ ಕಾನೂನು..? ಅದೆಲ್ಲವನ್ನೂ ಕಂಪ್ಲೀಟಾಗಿ ನಿಮ್ಮ ಮುಂದೆ ತೆರೆದಿಡ್ತಿದೆ ಸುವರ್ಣ ಫೋಕಸ್ ಮುಂದಿನ 45 ದಿನಗಳು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.