Asianet Suvarna News Asianet Suvarna News

ಸಿದ್ದರಾಮಯ್ಯ ನಿಜ ಕನಸುಗಳಿಂದ ಬಿಜೆಪಿಗೆ ಭಯವಾಗಿದೆ: ಭವ್ಯಾ ನರಸಿಂಹಮೂರ್ತಿ ಕಿಡಿ

ಸಿದ್ದರಾಮಯ್ಯ ಬಿಜೆಪಿಗೆ ದೊಡ್ಡ ಗೋಡೆಯಾಗಿ ನಿಂತಿದ್ದು, ಬಿಜೆಪಿಯ ಪ್ರತಿಯೊಂದು ಸ್ಕ್ಯಾಮ್‌ ಬಯಲಿಗೆ ಎಳೆಯುತ್ತಿದ್ದಾರೆ ಎಂದು ಭವ್ಯಾ ನರಸಿಂಹಮೂರ್ತಿ ಹೇಳಿದರು.
 

ಪಿಎಸ್ಐ ಹಗರಣ, 40% ಕಮೀಷನ್‌ ಹಾಗೂ ಓಟರ್‌ ಐಡಿ ಸ್ಕ್ಯಾಮ್‌'ಗಳನ್ನು ಮುಚ್ಚಿ ಹಾಕಲು, ಸಿದ್ದರಾಮಯ್ಯರನ್ನು ತೆಜೋವಧೆ ಮಾಡಲು ಬಂದರೆ ಕಾಂಗ್ರೆಸ್‌ ಕಾರ್ಯಕರ್ತರಾಗಿ ನಾವು ಸುಮ್ಮನೆ ಇರಲ್ಲ ಎಂದು  ಭವ್ಯಾ ನರಸಿಂಹಮೂರ್ತಿ ಹೇಳಿದರು. ಬಿಜೆಪಿಗೆ ಭಯವಾಗಿದೆ, ನಾಲ್ಕು ತಿಂಗಳಲ್ಲಿ ಎಲೆಕ್ಷನ್‌ ಬರುತ್ತಿದೆ. ಜನರಿಗೆ ಗೊತ್ತಾಗುತ್ತೆ, ಗೆಲ್ಲಲು ಯಾರು ಯಾವ ಮಟ್ಟಕ್ಕೆ ಹೋಗುತ್ತಾರೆ ಎಂದು ಜನರಿಗೆ ಗೊತ್ತಾಗುತ್ತೆ ಎಂದರು. ಸಿದ್ದರಾಮಯ್ಯರದ್ದು ನಿಜ ಕನಸು, ಹಸಿವು ಮುಕ್ತ ಕರ್ನಾಟಕ,  ಗುಡಿಸಲು ಮುಕ್ತ ಕರ್ನಾಟಕ. ಶಿಕ್ಷಣ ಕ್ರಾಂತಿ ಇದು ಸಿದ್ದರಾಮಯ್ಯ ಕನಸು ಎಂದು ಹೇಳಿದರು.

'ದಳಪತಿ'ಗಳ ಪ್ರತಿಷ್ಠೆಯ ಕಣವಾದ ಕೆ.ಆರ್‌ ಪೇಟೆ: ಹೆಚ್‌ಡಿಕೆ-ರೇವಣ್ಣ ನಡ ...

Video Top Stories