Asianet Suvarna News Asianet Suvarna News

ರಸ್ತೆ & ಚರಂಡಿ ವಿಚಾರ ಬಿಟ್ಹಾಕಿ, ಲವ್ ಜಿಹಾದ್ ಬಗ್ಗೆ ಯೋಚಿಸಿ: ನಳಿನ್ ಕುಮಾರ್ ಕಟೀಲ್

ರಸ್ತೆ ಹಾಗೂ ಚರಂಡಿ ಅಂತ ಮಾತನಾಬೇಡಿ. ನಿಮ್ಮ ಮಕ್ಕಳ ಬದುಕಿನ ಪ್ರಶ್ನೆ ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. 

ಲವ್ ಜಿಹಾದ್ ನಿಲ್ಲಿಸಲು ಭಾರತೀಯ ಜನತಾ ಪಾರ್ಟಿ ಬೇಕು. 2014ರ ನಂತರ ಎಲ್ಲೂ ಈ ದೇಶದಲ್ಲಿ ಬಾಂಬ್‌ ಬ್ಲಾಸ್ಟ್‌ಗಳು ಆಗಿಲ್ಲ. ಅದು ನರೇಂದ್ರ ಮೋದಿ ತಾಕತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆ ಕರಾವಳಿ ಜಿಲ್ಲೆ ಆತಂಕದಲ್ಲಿ ಇದೆ. ಆ ಆತಂಕದ ನಿವರಣೆಗೆ ಒಂದೇ ಒಂದು ದಾರಿ ಅಮಿತ್‌ ಶಾ ಹಾಗೂ ನರೇಂದ್ರ ಮೋದಿ ಎಂದರು. ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ತಂದಿದ್ದೇವೆ. ಹಾಗೆ ಲವ್ ಜಿಹಾದ್ ನಿಷೇಧ ಕಾಯ್ದೆಯನ್ನು ತರುತ್ತೇವೆ ಎಂದು ಹೇಳಿದರು‌.

ನೋಟು ಅಮಾನ್ಯಕ್ಕೆ ಜೈ ಎಂದ ಸುಪ್ರೀಂ, ಕಾಂಗ್ರೆಸ್‌ಗಿನ್ನು ಹೊಸ ಅಸ್ತ್ರ ಹುಡುಕೋದು ಅನಿವಾರ್ಯ

Video Top Stories