Asianet Suvarna News Asianet Suvarna News

'ಶ್ರೀರಾಮುಲುದ್ದು ಬಿಲ್ಡಪ್ ಮಾತ್ರ, ಮಂತ್ರಿಗಿರಿ ನಿಭಾಯಿಸಲು ಬರಲ್ಲ'

ಆರೋಗ್ಯ ಸಚಿವ ಶ್ರೀರಾಮುಲು ಬಿಲ್ಡಪ್ ಮಾತ್ರ ಕೊಡ್ತಾರೆ, ಮಂತ್ರಿಗಿರಿ ನಿಭಾಯಿಸಲು ಬರಲ್ಲ, ರಾಮುಲು ಬುಡಬಡಿಕೆಗೆ ಯಾರು ತಲೆಕೆಡಿಸಿಕೊಳ್ಳಲ್ಲ, ಬಳ್ಳಾರಿಯಲ್ಲಿ ಅವರ ವರ್ಚಸ್ಸು ಕಡಿಮೆಯಾಗಿದೆ..... ಹೀಗೆ ಶ್ರೀರಾಮುಲು ವಿರುದ್ಧ ಮಾಜಿ ಶಾಸಕರೊಬ್ಬರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಚಿತ್ರದುರ್ಗ (ಜ.10): ಆರೋಗ್ಯ ಸಚಿವ ಶ್ರೀರಾಮುಲು ಬಿಲ್ಡಪ್ ಮಾತ್ರ ಕೊಡ್ತಾರೆ, ಮಂತ್ರಿಗಿರಿ ನಿಭಾಯಿಸಲು ಬರಲ್ಲ, ರಾಮುಲು ಬುಡಬಡಿಕೆಗೆ ಯಾರು ತಲೆಕೆಡಿಸಿಕೊಳ್ಳಲ್ಲ, ಬಳ್ಳಾರಿಯಲ್ಲಿ ಅವರ ವರ್ಚಸ್ಸು ಕಡಿಮೆಯಾಗಿದೆ..... ಹೀಗೆ ಶ್ರೀರಾಮುಲು ವಿರುದ್ಧ ಮಾಜಿ ಶಾಸಕ ತಿಪ್ಪೇಸ್ವಾಮಿ  ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ನೋಡಿ | ಯಾರ್ಯಾರಿಗೆ ಸಂಪುಟದಲ್ಲಿ ಸ್ಥಾನ.. ಕೆಲವರಿಗೆ ಕೋಕ್..ಕೆಲವರಿಗೆ ಶಾಕ್!...

ಒಂದೊಂದು ಇಲಾಖೆಗೆ ಒಬ್ಬೊಬ್ಬ ಪಿಎ ಇಟ್ಟುಕೊಂಡಿದ್ದಾರೆ, ಒಟ್ಟು 20 ಪಿಎಗಳಿದ್ದಾರೆ. ಜನಸಾಮಾನ್ಯರ ಸಮಸ್ಯೆ ಬಗೆಹರಿಸುವವರು ಯಾರೂ ಇಲ್ಲ, ಬಂದ ಪುಟ್ಟ ಹೋದ ಪುಟ್ಟ ರಿತಿಯಲ್ಲಿ ಬಂದು  ಮುಖ ತೊರಿಸಿ ಹೋಗ್ತಾರೆ, ಸುಳ್ಳುಗಳನ್ನು ಹೇಳೋದ್ರಲ್ಲಿ ನಂಬರ್ ಒನ್, ಎಂದು ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ.