
ನಾವು ಮಾಡಿದ ಕೆಲಸವನ್ನೇ ನರೇಂದ್ರ ಮೋದಿ ಉದ್ಘಾಟಿಸ್ತಾರೆ: ಸಿದ್ದರಾಮಯ್ಯ ಟೀಕೆ
ನಾವು ಮಾಡಿದ ಕೆಲಸವನ್ನೇ ಮೋದಿ ಉದ್ಘಾಟಿಸ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ವಿಚಾರವಾಗಿ, ಕಲಬುರಗಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ನಾವು ಅಡುಗೆ ಮಾಡಿದ್ದೀವಿ, ಮೋದಿ ಬಡಿಸಕ್ಕೆ ಬರ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಯುಪಿಎ ಸರ್ಕಾರ ಇದ್ದಾಗ HAL ಘಟಕ ಮಾಡಿದ್ದು, ಈಗ ಹೆಚ್ಎಎಲ್ ಘಟಕ ಉದ್ಗಾಟನೆಗೆ ಮೋದಿ ಬರುತ್ತಿದ್ದಾರೆ. ಕಲಬುರಗಿ ಹಕ್ಕು ಪತ್ರ ವಿತರಣೆಗೆ ಮೋದಿ ಬಂದಿದ್ರು, ನಾನು ಸಿಎಂ ಇದ್ದಾಗ ಒಂದು ಕಾನೂನು ಮಾಡಿದ್ದೆ ವಾಸಿಸುವವನೇ ಮನೆಯೊಡೆಯ ಎನ್ನುವ ಕಾನೂನು. ಆದ್ರೆ ಹಕ್ಕುಪತ್ರ ವಿತರಣೆಗೆ ಬಂದಿದ್ದು ಮಾತ್ರ ಮೋದಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ