
ನಾನು ಸ್ವತಂತ್ರ ವ್ಯಕ್ತಿ, ಈ ಬಾರಿ ಕಾಂಗ್ರೆಸ್ನಿಂದ ಪ್ರಚಾರ ಮಾಡುತ್ತೇನೆ: ಹೆಚ್. ವಿಶ್ವನಾಥ್
ಕಾಂಗ್ರೆಸ್'ನಿಂದ ಶುರುವಾದ ಹೆಚ್. ವಿಶ್ವನಾಥ್ ರಾಜಕಾರಣ ಮತ್ತೆ ಕಾಂಗ್ರೆಸ್ಗೆ ಬಂದು ನಿಂತಿದೆ. ಈ ಕುರಿತು ಅವರು ಮಾತನಾಡಿದ್ದು, ಅದರ ಡೀಟೇಲ್ಸ್ ಇಲ್ಲಿದೆ.
ನಾನು ಸ್ವತಂತ್ರ ವ್ಯಕ್ತಿ, ಈ ಬಾರಿ ಕಾಂಗ್ರೆಸ್ನಿಂದ ಪ್ರಚಾರ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು. ದೇಶದಲ್ಲಿ ಪಕ್ಷಾಂತರ ಮಾಡದ ರಾಜಕಾರಣಿ ಇಲ್ಲ, ಇದಕ್ಕೆ ಸಂವಿಧಾನದಲ್ಲೂ ಅವಕಾಶವಿದೆ. ಬಿಜೆಪಿಯಲ್ಲಿ ಇರುವವರಲ್ಲಿ ಶೇ.60ರಷ್ಟು ಜನರು ಪಕ್ಷಾಂತರಿಗಳೇ. ಜೆಡಿಎಸ್ ಹಾಗೂ ಕಾಂಗ್ರೆಸ್'ನಲ್ಲೂ ಪಕ್ಷಾಂತರಿಗಳೇ ಇದ್ದಾರೆ ಎಂದರು. ಪಕ್ಷಾಂತರ ಎನ್ನುವಂತದ್ದು ಅವರು ತೆಗೆದುಕೊಳ್ಳುವ ತೀರ್ಮಾನ. ಆಯಾ ಸಂದರ್ಭಕ್ಕೆ ಪರಿಸ್ಥಿತಿಗರ ಅನುಗುಣವಾಗಿ ಕಾಲಘಟ್ಟದ ಮೇಲೆ ತೀರ್ಮಾನಗಳನ್ನು ಕೆಲವು ನಾಯಕರು ತೆಗೊಳ್ಳುತ್ತಾರೆ ಎಂದು ಹೆಚ್. ವಿಶ್ವನಾಥ್ ನ್ಯೂಸ್ ಅವರ್ ಸ್ಪೆಷಲ್'ನಲ್ಲಿ ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ