
Bitcoin Scam; ಶ್ರೀಕಿ ಬಗ್ಗೆ ಗೊತ್ತಿದ್ದವರು ಅಂದು ಏಕೆ ಸುಮ್ಮನಿದ್ರು?
* ಮುಗಿಯುತ್ತಿಲ್ಲ ಬಿಟ್ ಕಾಯಿನ್ ಪ್ರಕರಣದ ಸದ್ದು
* ನಾನು ಸಿಎಂ ಆಗಿದ್ದ ವೇಳೆ ಶ್ರೀಕಿ ಒಬ್ಬ ಹ್ಯಾಕರ್ ಎನ್ನುವುದು ಗೊತ್ತೆ ಇರಲಿಲ್ಲ
* ಶ್ರೀಕಿ ಮೇಲೆ ಯಾವ ದೂರು ದಾಖಲಾಗಿರಲಿಲ್ಲ
* ಬಿಜೆಪಿ ಆರೋಪಗಳಿಗೆ ಸಿದ್ದರಾಮಯ್ಯ ಉತ್ತರ
ಬೆಂಗಳೂರು(ನ. 15) ಬಿಟ್ ಕಾಯಿನ್ (Bitcoin Scam) ಪ್ರಕರಣದಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ಮಾತಿನ ಸಮರ ಮುಂದಿವರಿದಿದೆ. ಬಿಜೆಪಿ ಆರೋಪಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಉತ್ತರ ಕೊಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಡೆಲ್ಲಿಯಿಂದ ಬಂದು ಬಿಎಸ್ವೈ ಭೇಟಿಯಾದ ಶೆಟ್ಟರ್
ನಾನು ಸಿಎಂ ಆಗಿದ್ದಾಗ ಯಾರೂ ಶ್ರೀಕಿ ಮೇಲೆ ದೂರು ಕೊಟ್ಟಿರಲಿಲ್ಲ. ಶ್ರೀಕಿ ಒಬ್ಬ ಹ್ಯಾಕರ್ ಎಂಬ ಮಾಹಿತಿಯೂ ಇರಲಿಲ್ಲ. ಆಗ ವಿಪಕ್ಷದಲ್ಲಿ ಇದ್ದ ಬಿಜೆಪಿಯವರು ಏನು ಮಾಡುತ್ತಿದ್ದರು? ಎಂದು ಪ್ರಶ್ನೆ ಕೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಬಿಟ್ ಕಾಯಿನ್ ಹಗರಣದ್ದೇ ಸುದ್ದಿ.