ಕನಕಪುರ 'ಬಂಡೆ' ಹೊಡೆಯಲು ಸಾಹುಕಾರ್ ಸ್ಕೆಚ್: ಡಿಕೆಶಿ ವಿರುದ್ಧ 'ಸಿಡಿ'ದ ಜಾರಕಿಹೊಳಿ
ಗೋಕಾಕ್ ಸಾಹುಕಾರನ ಫೈಲ್ಸ್'ನಲ್ಲಿ ಸಿಡಿ ಸೇಡಿನ ರಹಸ್ಯ ಅಡಗಿದೆ. ರಾಸಲೀಲೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸುತ್ತಾ? ಈ ಕುರಿತು ಇಲ್ಲಿದೆ ಡಿಟೇಲ್ಸ್.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇಡಿನ ಯುದ್ಧ ಶುರು ಮಾಡಿದ್ದಾರೆ. ಸಾಹುಕಾರನ ಫೈಲ್ಸ್'ನಲ್ಲಿ ಸಿಡಿ ಸೇಡಿನ ರೋಚಕ ರಹಸ್ಯ ಅಡಗಿದೆ. ಎಲೆಕ್ಷನ್ ಹೊತ್ತಿನಲ್ಲಿ ಡಿಕೆಶಿಯನ್ನು ಟಾರ್ಗೆಟ್ ಮಾಡಿರುವ ಜಾರಕಿಹೊಳಿ ತಂತ್ರದ ಹಿಂದೆ ಇಂಟ್ರೆಸ್ಟಿಂಗ್ ಲೆಕ್ಕಚಾರ ಇದೆ. ಸಿಬಿಐ ತನಿಖೆಗೆ ಸಾಹುಕಾರ್ ಪಟ್ಟು ಹಾಕ್ತಿದ್ದು, ಇದರ ಹಿಂದೆ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.