Asianet Suvarna News Asianet Suvarna News

'RR ನಗರದಲ್ಲಿ ಅಭಿವೃದ್ಧಿಯಾಗಿದ್ದು ಜನರದ್ದಾ? ಗೆದ್ದು ಹೋದವರದ್ದಾ'?

ಆರ್‌ಆರ್ ನಗರ ಉಪಚುನಾವಣಾ ಅಖಾಡದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ.  ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಡಿಕೆ ಸುರೇಶ್ ಪ್ರಚಾರ ನಡೆಸುವ ವೇಳೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

 

ಬೆಂಗಳೂರು (ಅ. 27): ಆರ್‌ಆರ್ ನಗರ ಉಪಚುನಾವಣಾ ಅಖಾಡದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ.  ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಡಿಕೆ ಸುರೇಶ್ ಪ್ರಚಾರ ನಡೆಸುವ ವೇಳೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

' ಜನರು ಬದಲಾವಣೆ ಬಯಸುವ ಉತ್ಸಾಹದಲ್ಲಿದ್ದಾರೆ. ಅಭಿವೃದ್ಧಿ ಹೆಸರನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ಭಾಗಗಳನ್ನು ನೋಡಿದರೆ ಯಾರ ಅಭಿವೃದ್ಧಿಯಾಗಿದೆ ಅನ್ನೋದು ಚರ್ಚೆಯಾಗಬೇಕಿದೆ. ಜನರ ಅಭಿವೃದ್ಧಿನಾ, ಗೆದ್ದು ಹೋದವರ ಅಭಿವೃದ್ಧಿನಾ, ಪಕ್ಷಕ್ಕೆ ಮೋಸ ಮಾಡಿ ಹೋದವರ ಅಭಿವೃದ್ಧಿನಾ? ಎಂದು ಮುನಿರತ್ನ ಹೆಸರು ಹೇಳದೇ ಟಾಂಗ್ ನೀಡಿದ್ದಾರೆ. 

ಶಿರಾ ಬೈ ಎಲೆಕ್ಷನ್: ಸಂದರ್ಶನದಲ್ಲಿ ಮಹತ್ವದ ವಿಷಯಗಳನ್ನು ಬಿಚ್ಚಿಟ್ಟ ವಿಜಯೇಂದ್ರ

ಜಾತಿ ರಾಜಕಾರಣ, ವೋಟರ್ ಐಡಿ ರಾಜಕಾರಣ ಮಾಡುವ ಕುಖ್ಯಾತಿ ಮುನಿರತ್ನ ಅವರದ್ದು. ನಾವು ಬಿಜೆಪಿಯವರನ್ನು ಕೇಳಿ ರಾಜಕಾರಣ ಮಾಡಬೇಕಿಲ್ಲ. ಅವರಿಗೆ ನೈತಿಕವಾದ ಹಕ್ಕಿಲ್ಲ' ಎಂದು ವಾಗ್ಧಾಳಿ ನಡೆಸಿದ್ದಾರೆ. 

Video Top Stories