Asianet Suvarna News Asianet Suvarna News

Reservation: ಪಂಚಮಸಾಲಿ 'ಮೀಸಲಾತಿ' ಕತ್ತಿ ಮೇಲಿನ ನಡಿಗೆ: ಜ. 12ರಂದು ದೆಹಲಿಯಲ್ಲಿ ಮಹತ್ವದ ಸಭೆ?

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಪಂಚಮಸಾಲಿ ಮೀಸಲಾತಿ ವಿಚಾರವಾಗಿಯೂ ಎಚ್ಚರಿಕೆಯಿಂದ ಹೆಜ್ಜೆ ಇಡಲು ತಿಳಿಸಿದೆ.

ಮೀಸಲಾತಿ ವಿಚಾರದಲ್ಲಿ ಎಚ್ಚರಿಕೆ ವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಹೈಕಮಾಂಡ್ ಸಲಹೆ ನೀಡಿದೆ. ಸಮುದಾಯದ ಒತ್ತಡಕ್ಕೆ ಮಣಿದು ತಪ್ಪು ತೀರ್ಮಾನ ಮಾಡಬೇಡಿ. ಸರ್ವ ಪಕ್ಷಗಳ ಸಭೆ ಕರೆದು ಎಲ್ಲಾ ನಾಯಕರ ನಿಲುವು ತಿಳಿದುಕೊಳ್ಳಿ. ಮೀಸಲಾತಿಗೆ ಸಾಮಾಜಿಕ ನ್ಯಾಯವೇ ಮಾನದಂಡವಾಗಿರಬೇಕು. ಈ ವಿಚಾರವಾಗಿ ಡಿ. 30 ಮತ್ತು 31ರ ಅಮಿತ್‌ ಶಾ ಭೇಟಿಯಲ್ಲಿ ಚರ್ಚೆ ಆಗಬಹುದು ಹೊರತು, ನಿರ್ಣಯಗಳು ಆಗುವುದಿಲ್ಲ. ಜನವರಿ 12ರಂದು ದೆಹಲಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಭೆ ಮಾಡಲಾಗುತ್ತದೆ. ಮತ್ತೊಮ್ಮೆ ಸಿಎಂ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಲಿದ್ದಾರೆ.