ಡಿಕೆಶಿ ವಿರುದ್ಧ ಜಾರಕಿಹೊಳಿ ಸೇಡಿನ ಯುದ್ಧ: 'ಸಿಡಿ'ದ ಸಾಹುಕಾರ್'ನ ಶಪಥ ಏನು?

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಸಿಡಿ ಷಡ್ಯಂತ್ರ ರೂವಾರಿ ಅಂದಿರುವ ರಮೇಶ್ ಜಾರಕಿಹೊಳಿ, ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
 

Share this Video
  • FB
  • Linkdin
  • Whatsapp

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ಸಮರ ಮುಂದುವರೆದಿದ್ದು, ಡಿಕೆಶಿ ವಿರುದ್ಧ ಜಾರಕಿಹೊಳಿ ಸೇಡಿನ ಯುದ್ಧ ಸಾರಿದ್ದಾರೆ. ಸಾಹುಕಾರನ ಕೈಯ್ಯಲ್ಲಿ ಸಿಡಿ ಷಡ್ಯಂತ್ರದ 20 ಗಂಟೆಗಳ ಸಾಕ್ಷಿ ಇದೆಯಂತೆ. ಡಿಕೆಶಿ ರಾಜಕಾರಣ ನನ್ನಿಂದಲೇ ಅಂತ್ಯ, ಬಂಡೆ ಪುಡಿ ಮಾಡಿಯೇ ನನ್ನ ರಾಜಕೀಯ ನಿವೃತ್ತಿ‌ ಎಂದು ಜಾರಕಿಹೊಳಿ ಪ್ರತಿಜ್ಞೆ ಮಾಡಿದ್ದಾರೆ. 25 ವರ್ಷಗಳ ಸ್ನೇಹ, 4 ವರ್ಷಗಳ ದ್ವೇಷ ಹಾಗೂ ಸಿಡಿ ಷಡ್ಯಂತ್ರದ ಸಾಕ್ಷಿ ನುಡಿಯಿತಾ ಸಾಹುಕಾರ ರಿಲೀಸ್ ಮಾಡಿದ ಆ 18 ಸೆಕೆಂಡ್'ಗಳ ಆಡಿಯೋ..? ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ರಿಲೀಸ್ ವಿಳಂಬ?: ಬಂಡಾಯದ ಬೆಂಕಿಗೆ ರಾ ...


Related Video